ಹೊರಬೈಲಿನಿಂದ ಹೊರಟ ಬೃಹತ್ ಕಾಲ್ನಡಿಗೆ ಜಾಥಾ
ಸುದ್ದಿಲೈವ್/ಶಿವಮೊಗ್ಗ
ತಾಲೂಕಿನ ಹೊರೆಬೈಲಿನಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಆರಂಭಗೊಂಡಿತುವ ಬೃಹತ್ ಕಾಲ್ನಡಿಗೆ ಜಾಥಾ ಕುಂಸಿ ಗ್ರಾಮವನ್ನ ದಾಟಿದೆ.
ಹೊರೆಬೈಲು ಗ್ರಾಮದಲ್ಲಿ ದಲಿತ ಯುವತಿಯ್ನ ಮದುವೆಯಾದ ಹಿನ್ನಲೆಯಲ್ಲಿ ಸಾಮಾಜಿಕ ಬಹಿಷ್ಕಾರವನ್ನ ಮತ್ತು ಜಾತಿನಿಂದನೆ ಪ್ರಕರಣದ ದೂರು ದಾಖಲಾಗಿತ್ತು. ಈ ಘಟನೆಯ ಹಿಂದೆ ಡಿಎಸ್ ಎಸ್ ಅಂಬೇಡ್ಕರ್ ವಾದದ ಮುಖಂಡರ ಕೈವಾಡವಿದ್ದು ಇದನ್ನ ವಿರೋಧಿಸಿ ಡಿಎಸ್ ಎಸ್ ಗುರುಮೂರ್ತಿ ಬಣ ಪ್ರತಿಭಟಿಸಿದೆ.
ಹೊರೆಬೈಲಿನಿಂದ ಜಾಥಾ ಆರಂಭವಾಗಿದೆ. ಡಿಎಸ್ ಎಸ್ ಗುರುಮೂರ್ತಿ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಅಘೋಷಿತ ಸಾಮಾಜಿಕ ಬಹಿಷ್ಕಾರದ ಹಿನ್ನಲೆಯಾದರೂ ಏನು? ಹಾಲೇಶಪ್ಪನವರು ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ಇರುವ ದಾಖಲಾತಿಯಾದರೂ ಏನು ಎಂದು ಒತ್ತಾಯಿಸಿ ಜಾಥಾ ಆರಂಭವಾಗಿದೆ.
ಇಂದಿನ ಜಾಥಾ ಹಿನ್ನಲೆಯಲ್ಲಿ ವಿವಾಹಿತ ಮಹಿಳೆ ವಿಷ ಸೇವಿಸಿ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಈ ಪ್ರಕರಣ ಏಲ್ಲಿಗೆ ಬಂದು ನಿಲ್ಲಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ-https://suddilive.in/archives/8054