ಶೋಷಿತರ ಸಮಾವೇಶಕ್ಕೆ ಜಿಲ್ಲೆಯಿಂದ 25 ಸಾವಿರ ಜನಭಾಗಿ ನಿರೀಕ್ಷೆ
ಸುದ್ದಿಲೈವ್/ಶಿವಮೊಗ್ಗ
ನಾಳೆ ಚಿತ್ರದುರ್ಗದಲ್ಲಿ ಶೋಷಿತ ವರ್ಗಗಳ ಮಹಾಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಜಿಲ್ಲೆಯಿಂದ 25 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಮಾಜಿ ಎಂಎಲ್ ಸಿ ಆರ್ ಪ್ರಸನ್ನ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ. ಕಾಂತರಾಜು ವರದಿ ಸ್ವೀಕರಿಸಿ ಎರಡೂ ಸದನದಲ್ಲಿ ಚರ್ಚೆ ಆಗಬೇಕು. ಜಾತಿ ಆಧಾರದ ಮೇಲೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಜಾತಿ ಜನಾಂಗಗಳಿಗೆ ದೊರಕಬೇಕಿದೆ ಎಂದರು.
165 ಕೋಟಿ ವೆಚ್ಚದಲ್ಲಿ ವರದಿ ತಯಾರಿದೆ. ಶೇ.97% ತಳ ಸಮುದಾಯದವರಿದ್ದಾರೆ. ಕೇಂದ್ರ ಜಾರಿಗೊಳಿಸಿರುವ ಇಡಬ್ಲುಎಸ್ ಶೇ. 10 ರಷ್ಟು ರದ್ದು ಮಾಡಬೇಕು. ಮಹಿಳಾ ಮೀಸಲಾತಿ ಕಾಯಿದೆಯನ್ನ ಕೂಡಲೇ ಜಾರಿ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲಿ ಎಸ್ ಸಿ ಎಸ್ಟಿ ಒಬಿಸಿ ಮತ್ತು ಅಲ್ಪಸಂಖ್ಯಾತರ ಮಹಿಳೆಯರಿಗೆ ಮೀಸಲಾತಿಯನ್ನ ಕಲ್
ಉತ್ತರ ಬ್ಲಾಕ್ ಕಾಂಗ್ರೆಸ್ ನ ಶಿವಕುಮಾರ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲ ಪಾಶ, ಕಲಗೋಡು ರತ್ನಾಕರ್, ಅಕ್ರಮ್ ಪಾಶ, ಅಶೋಕ್, ರಂಗನಾಥ್, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/7814