ಕ್ರೈಂ ನ್ಯೂಸ್

ಹೋರಿ ಬೆದರಿಸುವ ಸ್ಪರ್ಧೆ-ಓರ್ವ ಸಾವು

ಸುದ್ದಿಲೈವ್/ಶಿಕಾರಿಪುರ

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕನೋರ್ವ ಸಾವು ಕಂಡಿದ್ದಾನೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರ್ಲಘಟ್ಟದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಹೋದ ಯುವಕ ಹೋರಿ ತಿವಿದು ಸಾವನ್ನಪ್ಪಿದ್ದಾನೆ‌ ಸಾವನ್ನಪ್ಪಿದ ಯುವಕನನ್ನ ಪರಶುರಾಮ (27) ಎಂದು ಗುರುತಿಸಲಾಗಿದೆ.

ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ನಿವಾಸಿ  ಪರಶುರಾಮ ಎಂದು ತಿಳಿದು ಬಂದಿದೆ. ತರ್ಲಘಟ್ಟದಲ್ಲಿ  ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಯುವಕ ತೆರಳಿದ್ದನು.

ಮೃತ ಯುವಕನ ಕುಟುಂಬಸ್ಥರಿಂದ ಆಯೋಜಕರ ವಿರುದ್ದ ದೂರು ದಾಖಲಾಗಿತ್ತು. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋರಿ ಬೆದರಿಸಯವ ಸ್ಪರ್ಧೆಯಲ್ಲಿ ಈ ವರ್ಷ ಇದೇ ಮೊದಲ ಬಾರಿಗೆ ಹೋರಿ ತಿವಿತಕ್ಕೆ ಸಾವುಕಂಡ ಪ್ರಕರಣವಾಗಿದೆ.

ಇದನ್ನೂ ಓದಿ-https://suddilive.in/archives/7386

Related Articles

Leave a Reply

Your email address will not be published. Required fields are marked *

Back to top button