ಸ್ಥಳೀಯ ಸುದ್ದಿಗಳು

ಮತ್ತೆ ಗರಿಗೆದರಿದ ವಿಐಎಸ್ ಎಲ್ ಕಾರ್ಖಾನೆ ಉಳಿಸಿ ಹೋರಾಟ!

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಆಸ್ಮಿತೆಯಲ್ಲಿ ಒಂದಾಗಿರುವ ವಿಐಎಸ್ ಎಲ್ ಮತ್ತು ಎಂಪಿಎಂ ಕಾರ್ಖಾನೆಯನ್ನ ಉಳಿಸಿಕೊಳ್ಳಲು ಸತತ ಪ್ರಯತ್ನ ಕಳೆದ 7 ವರ್ಷದಿಂದ ನಡೆಯುತ್ತಿದೆ. ಆದರೆ ಚುನಾವಣೆಯ ವೇಳೆ ಹಾಗೆ ರಣ ಭೈರವನಂತೆ ಸೇವ್ ವಿಐಎಸ್ ಎಲ್ ಹೋರಾಟಕ್ಕೆ ಬೆಂಬಲ ದೊರೆತರೂ ಚುನಾವಣೆ ಮುಗಿದ ನಂತರ ಮಖಾಡೆ ಮಲಗುವ ವಿಷಯವಾಗಿ ಮಾರ್ಪಾಟಾಗಿದೆ.

ನಿನ್ನೆ ಎಂಪಿ ರಾಘವೇಂದ್ರರವರ ಮನೆಯ ಮುಂದೆ ಧರಣಿ ಕುಳಿತು ತಿಂಗಳಲ್ಲಿ 26 ದಿನಗಳ ಕೆಲಸದ ಅವಕಾಶ ಕಲ್ಪಿಸಿಕೊಡಿ ಎಂದು ಪ್ರತಿಭಟಿಸಿದ್ದ ವಿಐಎಸ್ಎಲ್ ಕಾರ್ಮಿಕರು ಇಂದು ಭದ್ರಾವತಿಯಲ್ಲೇ ಪಂಚಿನ ಮೆರವಣಿಗೆ ನಡೆಸಿ ಸೇವ್ ವಿಐಎಸ್‌ಎಲ್ ಎಂದು ಗಮನಸೆಳೆದಿದ್ದಾರೆ.

ಭದ್ರಾವತಿಯಲ್ಲಿ ವಿಐಎಸ್ ಎಲ್ ಕಾರ್ಖಾನೆ ನೌಕರರಿಂದ ಪಂಜಿನ ಮೆರವಣಿಗೆ ನಡೆದಿದೆ.
ವಿಐಎಸ್ ಎಲ್ ಉಳಿಸಿ ಎಂದು ಆಗ್ರಹಿಸಿ‌ ಪಂಜಿನ ಮೆರವಣಿಗೆ ನಡೆಸಲಾಗಿದೆ. ವಿಐಎಸ್ ಎಲ್ ಗುತ್ತಿಗೆ ನೌಕರರು ಮೆರವಣಿಗೆ ನಡೆಸಿದ್ದಾರೆ.

ವಿಐಎಸ್ ಎಲ್ ಕಾರ್ಖಾನೆಯಿಂದ ಅಂಡರ್ ಬ್ರಿಡ್ಜ್ ವರೆಗೆ ಪಂಜಿನ ಮೆರವಣಿಗೆ ನಡೆಸಲಾಗಿದೆ. ಕಾರ್ಖಾನೆ ಉಳಿವಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ಮನವಿ ಮಾಡಲಾಯಿತು. ಪಂಜನ್ನ ಹಿಡಿದು ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/7015

Related Articles

Leave a Reply

Your email address will not be published. Required fields are marked *

Back to top button