ರಾಜಕೀಯ ಸುದ್ದಿಗಳು

ಜ.22 ರ ನಂತರ ಅಯೋಧ್ಯಗೆ ಭೇಟಿ-ಸಿದ್ದರಾಮಯ್ಯ

ಸದ್ದಿಲೈವ್/ಶಿವಮೊಗ್ಗ

ನಾವೆಲ್ಲರೂ ಶ್ರೀರಾಮನ ಭಕ್ತರು ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ರಾಜಕೀಯ ಮಾಡದಂತೆ ಎಚ್ಚರಿಸಿದ್ದಾರೆ. ನಾವು ಬಿಜೆಪಿಗರ ವಿರುದ್ಧವೇ ಹೊರತು ರಾಮನ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ  ಅವರು ನಾವು ರಾಮನ ಭಕ್ತರು ಆದರೆ ಬಿಜೆಪಿ ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ.ಅದರ ವಿರುದ್ದ ವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದರು.

ನಾನು ಕೂಡ ಜನವರಿಯ 22 ನಂತರ  ಅಯೋಧ್ಯೆ ಗೆ ಹೋಗುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ ಶ್ರೀರಾಮ ಚಂದ್ರನನ್ನ ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನ ಮಾಬೇಡಿ ಎಂದು ಸಿದ್ದರಾಮಯ್ಯ ಗುಡಿದ್ದಾರೆ. ಇಷ್ಟುದಿನ ಸಿದ್ದರಾಮಯ್ಯನವರಿಗೆ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಎಂಬ ಚರ್ಚೆ ನಡೆಯುತ್ತಿತ್ತು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಶಿಯವರಿಗೆ ಆಹ್ವಾನ ಬಂದಿದ್ದರೂ ಉದ್ಘಾಟನೆಗೆ ತೆರಳೊಲ್ಲವೆಂಬ ನಿರ್ಧಾರ ಕೈಗೊಂಡಿದ್ದರು. ಕಾಂಗ್ರೆಸ್ ಅಧಿನಾಯಕಿಯೇ ಕಾಲಿಡದ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಉದ್್ಅಟನೆಯ ನಂತರ ಸಿದ್ದರಾಮಯ್ಯ ಹೋಗುವುದಾಗಿ ಹೇಳಿರುವುದು ಕುತೂಹಲ ಮೂಡಿಸಿದೆ.

ಡಿಸಿಎಂ ಚರ್ಚೆ ವಿಚಾರ

ಡಿಸಿಎಂ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೆ  ಸಿಎಂ ಸಿದ್ದರಾಮಯ್ಯ ನೋ ಡಿಸಿಎಂ, ನೋ ಕಮೆಂಟ್ಸ್ ಎಂದು ಹೊರಟು ಹೋಗಿದ್ದಾರೆ.

ಇದನ್ನೂ ಓದಿ-https://suddilive.in/archives/6673

Related Articles

Leave a Reply

Your email address will not be published. Required fields are marked *

Back to top button