ರಾಜಕೀಯ ಸುದ್ದಿಗಳು

ಚಾನೆಲ್ ವೊಂದರ ವಿರುದ್ಧ ಈಶ್ವರಪ್ಪ ಗರಂ

ಸುದ್ದಿಲೈವ್/ಶಿವಮೊಗ್ಗ

ಮಾಧ್ಯಮವೊಂದರಲ್ಲಿ ಮಾಜಿ ಡಿಸಿಎಂ ಈಶ್ವರಪ್ಪನವರು ಚುನಾವಣೆ ಅಖಾಡದಿಂದ ಹಿಂದೆ ಸರಿಯುವ ಬಗ್ಗೆ ಸಹಮತ ತೋರಿದ್ದಾರೆ ಎಂದು ಬಿತ್ತರವಾಗುತ್ತಿರುವ ಬೆನ್ನಲ್ಲೆ ಶಿವಮೊಗ್ಗದಲ್ಲಿ ಚಾನೆಲ್ ನ ಪ್ರತಿನಿಧಿಯ ವಿರುದ್ದ ಗರಂ ಆಗಿದ್ದಾರೆ.

ಸುದ್ದಿಗೋಷ್ಠಿ ನಡೆಸಲು ಬರುವ ಮುನ್ನ ಚಾನೆಲ್ ಒಂದರಲ್ಲಿ ಈ ರೀತಿ ಬಿತ್ತರವಾಗುತ್ತಿದೆ ಎಂದು ವಾಹಿನಿಯ ಪ್ರತಿನಿಧಿಯೊಬ್ಬರ ವಿರುದ್ಧ ಗರಂ ಆದರು. ವಾಹಿನಿಯ ಪ್ರತಿನಿಧಿಗೆ ಈ ವಿಷಯ ಬಿತ್ತರಿಸುವ ವೇಳೆ ಕುಡಿದಿದ್ದಾರಾ ಎಂದು ಕೇಳು. ಈ ಬಗ್ಗೆ ಕೇಸ್ ಹಾಕ್ತೀನಿ ಎಂದರು.

ಈ ವೇಳೆ ಪ್ರತಿನಿಧಿಯೂ ಸಹ ಸೂಕ್ತ ಉತ್ತರಕೊಟ್ಟಿದ್ದಾರೆ‌. ಟಿವಿಯಲ್ಲಿ ಬಿತ್ತರವಾಗುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇದ್ದರು ಪ್ರತಿನಿಧಿಯ ಮೇಲೆ ವಿರುದ್ಧ ಗರಂ ಆಗಿರುವುದು ಅಚ್ಚರಿ ಮೂಡಿಸಿದೆ.

ನನಗೆ ಯಾವ ಯಾವ ನಾಯಕರು ಸಂಪರ್ಕಿಸಿಲ್ಲ ಆದರೆ ಮಾಧ್ಯಮವೊಂದರಲ್ಲಿ ಬಿತ್ತರವಾಗುತ್ತಿದೆ. ಈ ಬಗ್ಗೆ ಸ್ಪಷ್ಠೀಕರಣವಿಲ್ಲದೆ ಪ್ರಸಾರವಾಗುತ್ತಿರುವ ಬಗ್ಗೆ ಗರಂ ಆದರು. ನಂತರ ಪತ್ರಿಕಾಗೋಷ್ಠಿಯ ನಡುವೆ ಯಾರೇ ಬಂದರೂ ಚುನಾವಣೆ ಅಖಾಡದಿಂದ ಹಿಂದೆ ಸರಿಯೊಲ್ಲ ಎಂದಿದ್ದಾರೆ.

ಇದನ್ನೂ ಓದಿ-https://suddilive.in/archives/11360

Related Articles

Leave a Reply

Your email address will not be published. Required fields are marked *

Back to top button