ಮಗನಿಗೆ ಟಿಕೇಟ್ ಸಿಗದಿದ್ದರೆ ಈಶ್ವರಪ್ಪ ಮತ್ತೊಬ್ಬ ಯತ್ನಾಳ್ ಆಗಲಿದ್ದಾರೆ-ಬೇಳೂರು
ಸುದ್ದಿಲೈವ್/ಶಿವಮೊಗ್ಗ
ಮಗನಿಗೆ ಟಿಕೇಟ್ ಸಿಗದಿದ್ದರೆ ನಾಳೆನೇ ಮಾಜಿ ಸಚಿವ ಈಶ್ವರಪ್ಪ ಮತ್ತೊಬ್ಬ ಯತ್ನಾಳ್ ಅಥವಾ ಪಕ್ಷದ ವಿರುದ್ಧ ಬುಸ್ ನಾಗ ಆಗುವ ಸಾಧ್ಯತೆಯಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವಾಜಿ ಸಚಿವ ಈಶ್ವರಪ್ಪ ಮಾತನಾಡುವುದನ್ನ ನಿಲ್ಲಿಸಬೇಕು. ನಾವು ಮೂಡು ಡಿಸಿಎಂ ಆದರೂ ಮಾಡ್ತೀವಿ ನಾಲ್ಕು ಡಿಸಿಎಂನ್ನಾದರೂ ಮಾಡ್ಕೊಂತೀವಿ ಬಿಜೆಪುಗರಿಗೆ ಏನು ಎಂದು ಗುಡುಗಿದರು.
ಎಂಎಲ್ ಸಿ ಹರಿಪ್ರಸಾದ್ ವಿರುದ್ಧ ಮಾತನಾಡುವ ಬಿಜೆಪಿಯವರು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಆಗ್ರಹ ಮಾಡಿತಾರೆ. ಹಾಗಾದರೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜೇಂದ್ರರನ್ನ ಮಂಪರು ಪರೀಕ್ಷೆಗೆ ಒಳಪಡಿಸಿ. ಯತ್ನಾಳ್ ಆರೋಪವಿರುವ 40 ಸಾವಿರ ಕೋಟಿ ಹಗರಣದ ಬಗ್ಗೆ ಮೊದಲು ಪ್ರತಿಕ್ರಿಯಿಸಿದರು ಎಂದರು.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂ ಸರಿಯಾದ ನಿರ್ಣಯ ಮಾಡಿದೆ. ಬೇಟಿ ಬಜಾವೋ ಬೇಟಿಪಡಾವೋ ಎಂಬ ಅಭಿಯಾನ ಏನು ಎಂಬುದು ಪ್ರಶ್ನಿಸಬೇಲಿದೆ. ರಾಮನ ಹೆಸರಿನಲ್ಲಿ ರಾಜಕಾರಣಬೇಡ ಎಂದು ಆಗ್ರಹಿಸಿದರು.
ಇದನ್ನೂ ಓದಿ-https://suddilive.in/archives/6617