ಕ್ರೈಂ ನ್ಯೂಸ್

ಅಕೌಂಟ್ ಮುಕ್ತಾಯಗೊಂಡಿದ್ದ ಬ್ಯಾಂಕಿನ ಚೆಕ್ ನೀಡಿ ವಂಚಿಸಿದ ಪ್ರಕರಣ, ಆರೋಪಿ ಬಂಧನ

ಸುದ್ದಿಲೈವ್/ಸಾಗರ

ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅಕೌಂಟ್ ಕ್ಲೋಸ್ ಆಗಿದ್ದ ಬ್ಯಾಂಕಿನ  ಚೆಕ್ ನೀಡಿ ವಂಚಿಸಿದ ಪ್ರಕರಣವನ್ನ ಸಾಗರದ ಟೌನ್ ಪೊಲೀಸರು ಬೇಧಿಸಿದ್ದಾರೆ.

2023 ನೇ ಸಾಲಿನಲ್ಲಿ ಹರೀಶ್ ಹೆಗ್ಡೆ ಎಂಬ ಹೆಸರು ಹೇಳಿಕೊಂಡು ಎಸ್ ಎನ್ ನಗರ ಹೊಸ ಬಡಾವಣೆಯ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ದಲ್ಲಿ ಕಾಳು ಮೆಣಸು ಕೊಂಡು ಕೊಳ್ಳುತ್ತೇನೆಂದು ಹೇಳಿ ಚೀಪ್ ಎಕ್ಸಿಕ್ಯೂಟಿವ್ ಅಧಿಕಾರಿಗೆ ಮೊದಲಿಗೆ  ತಮ್ಮ ವ್ಯವಹಾರಕ್ಕೆ 8 ಕ್ವಿಂಟಾಲ್ ಕಾಳುಮೆಣಸನ್ನ ಖರೀದಿಸುವುದಾಗಿ ಕರೆ ಮಾಡಿದ್ದನು.‌

ಇದನ್ನ ಅಧಿಕಾರಿಗಳು ಕೊಡಲು ಅಷ್ಟೊಂದು ಕಾಳು ಮೆಣಸಿಲ್ಲ ಎಂದು ನಿರಾಕರಿಸಿದ್ದರು. ನಂತರ ಒಬ್ಬ ವ್ಯಕ್ತಿಯನ್ನ ಕಳುಹಿಸುವೆ ಅಕೌಂಟ್ ಪೇ ಚೆಕ್ ಕೊಡುವುದಾಗಿ ವ್ಯವಹಾರ ಕುದರಿಸಿದ್ದನು.‌ ಕಂಬಳಿಕೊಪ್ಪ ಎಸ್.ಬಿ.ಐ ಶಾಖೆಯ ಮುಕ್ತಾಯ ಮಾಡಲಾದ ಖಾತೆಯ ಚೆಕ್ ನೀಡಿ, ಅಂದಾಜು ಮೌಲ್ಯ 2,76,675/- ರೂ ಗಳ 4 ಕ್ವಿಂಟಲ್ 25 ಕೆಜಿ ತೂಕದ ಕಾಳು ಮೆಣಸನ್ನು ಖರೀದಿಸಿದ್ದನು.‌

ಆದರೆ ಅಧಿಕಾರಿಗೆ ಚೆಕ್ ಬೌನ್ಸ್ ಆಗಿತ್ತು‌. ವಿಚಾರಿಸಿದಾಗ ಹರೀಶ್ ಹೆಗಡೆಯ ಅಕೌಂಟ್ ನಿಗದಿತ ಬ್ಯಾಂಕ್ ನಲ್ಲಿ ಮುಕ್ತಾಯಗೊಂಡಿತ್ತು.‌ಮುಕ್ತಾಯಗೊಂಡ ಚೆಕ್ ಎಂದು ಬ್ಯಾಂಕ್ ನವರು ತಿಳಿಸಿದ್ದಾರೆ. ಕರೆ ಮಾಡಿದಾಗ ಹರೀಶ್ ಹೆಗ್ಡೆಯ ಮೊಬೈಲ್ ಸ್ವಿಚ್ ಆಫ್ ಬಂದಿತ್ತು.

ಟೌನ್ ಠಾಣೆಯ‌ ಪಿಐ ಸೀತಾರಾಮ್ ರವರ ನೇತೃತ್ವದಲ್ಲಿ
ನಾಗರಾಜ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ರತ್ನಾಕರ್, ಶ್ರೀನಿವಾಸ, ಪಿಸಿ ಮೆಹಬೂಬ್, ವಿಕಾಸ್, ಕೃಷ್ಣಮೂರ್ತಿ, ವಿಶ್ವನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗದ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್, ಇಂದ್ರೇಶ್ ಮತ್ತು ವಿಜಯ್‌ ಕುಮಾರ್‌ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ಇಂದು  ಪ್ರಕರಣದ ಆರೋಪಿತರಾದ *1) ಅಕ್ಷಯ, 26 ವರ್ಷ, ವಿನೋಬನಗರ ಸಾಗರ, 2) ಹರ್ಷಿತ್ ಎಸ್ ಕೆ, 28 ವರ್ಷ, ಶೆಟ್ಟಿಸರ ಗ್ರಾಮ ಸಾಗರ ಮತ್ತು 3) ಕುಮಾರ ಅಭಿನಂದನ, 26 ವರ್ಷ, ರಾಮನಗದ್ದೆ ಸಾಗರ ತಾಲ್ಲೂಕು ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಅಂದಾಜು ಮೌಲ್ಯ 2,76,675/-ರೂಗಳ ಒಟ್ಟು 4 ಕ್ವಿಂಟಾಲ್ 25 ಕೆ.ಜಿ ತೂಕದ ಕಾಳುಮೆಣಸನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್ಪಿ‌ ಮಿಥುನ್ ಕುಮಾರ್ ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/6321

Related Articles

Leave a Reply

Your email address will not be published. Required fields are marked *

Back to top button