ರಾಜಕೀಯ ಸುದ್ದಿಗಳು

ನನ್ನ ವಿರುದ್ಧ ವಿಶೇಷವಾಗಿ ಟ್ವೀಟ್ ಮಾಡಿದವರಿಗೆ ಧನ್ಯವಾದಗಳು-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಚೆಕ್ ಬೌನ್ಸ್ ಪ್ರಕರಣ ವಿಚಾರಲ್ಲಿ ಕಾಮೆಂಟ್ಸ್ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಸಚಿವ ಮಧು‌ಬಂಗಾರಪ್ಪ ಗರಂ ಆಗಿದ್ದಾರೆ. ಬಿಜೆಪಿಯವರು ತಮ್ಮ ತಟ್ಟೆ ನೋಡಿಕೊಳ್ಳಲು ಹೇಳಿ ನನ್ನ ತಟ್ಟೆ ಕ್ಲೀನ್ ಆಗಿದೆ ಎಂದು ಟಾಂಗ್ ನೀಡಿದ್ದಾರೆ.

ಬಿಜೆಪಿಯವರಿಗೆ ನನ್ನ ಬಗ್ಗೆ ಮಾಹಿತಿ‌ ಇಲ್ಲ. ಮಾಹಿತಿ ಕೊರತೆ ಇದೆ. ಹೋಗಿ ಮಾಹಿತಿ ಹುಡುಕಿ. ನನಗೆ ಕಾನೊನು ಗೊತ್ತಿದೆ. ಯಾವನೋ ಟ್ವೀಟ್ ಮಾಡಿದ್ದಾನೆ. ಏನೇನು ಮಾತನಾಡಿದ್ದಾರೆ ಅವರ ತಟ್ಟೆ ನೋಡಿಕೊಳ್ಳಲು ಹೇಳಿಹೂ ಇಸ್ ಆರ್.ಅಶೋಕ್ ಯಾರಿ ಅವರು? ಆರ್.ಅಶೋಕ್ ಬ್ರಾಂಡ್ ಅಂಬಾಸಿಡರಾ?ಸ್ವಾಮೀಜಿ ಅವರು ಬ್ರಾಂಡ್ ಅಂಬಾಸಡರಾ? ಎಂದು‌ ಗರಂ ಆಗಿದ್ದಾರೆ.

ಯತ್ನಾಳ್ ಅವರು ಬಿಜೆಪಿಯಲ್ಲಿಯೇ ಭ್ರಷ್ಠಾಚಾರದ ಆರೋಪ, ಕೆಜೆಪಿ ಪಾರ್ಟ್ ೨ ಎಂದು ಹೇಳಿದ್ದಕ್ಕೆ ಮೊದಲು ಉತ್ತರ ತಗೊಂಡು ಬನ್ನಿ. ಆರ್.ಅಶೋಕ್ ಉಪ ಮುಖ್ಯಮಂತ್ರಿ ಆಗಿದ್ದರು.‌ ವಿಶೇಷವಾಗಿ ಟ್ವೀಟ್ ಮಾಡಿದವರಿಗೆ ಧನ್ಯವಾದ ಹೇಳಬೇಕು ನನ್ನನ್ನು ಎಚ್ಚರಿಸಿದ್ದಾರೆ ಎಂದು ಕುಹುಕವಾಗಿ ನುಡಿದರು.

ನನ್ನನ್ನು ಟಾರ್ಗೆಟ್ ಮಾಡಲು ಯಾರಿಂದಲೂ ಆಗಲ್ಲ. ಮಾಧ್ಯಮದವರು ಹಿಂದೆ ಇದ್ದಾರೆ. ನಾನು ಮುಂದೆ ಇದ್ದೇನೆ. ಚೆಕ್ ಬೌನ್ಸ್ ಕೇಸ್ ಅಲ್ಲ ಅದು ಮಾಧ್ಯಮದವರು ಮಾಹಿತಿ ತಿಳಿದು ಹಾಕಬೇಕಿತ್ತು. ಅದನ್ನೇ ಹಿಡಿದು ವಿಪಕ್ಷಗಳು ಮಾತನಾಡಿವೆ. ಆದರೆ ನನ್ನನ್ನ ಟೀಕಿಸುವ ಭರದಲ್ಲಿ‌ ವಿಪಕ್ಷಗಳು‌ ಯಡವಿದ್ದಾವೆ ಎಂದು ಸ್ಪಷ್ಟಪಡಿಸಿದರು.

ಶಾಲೆಯಲ್ಲಿ ಶೌಚಾಲಯ ಕ್ಲೀನಿಂಗ್ ವಿಚಾರದಲ್ಲಿ ಶಾಲೆಯಲ್ಲಿ ಕೆಲಸ ಮಾಡೋರ ಕೊರತೆ ಇದೆ. ಪೆನ್ನು ಹಿಡಿಯುವ ಕೈಯಲ್ಲಿ ಕಸ ಮೊರಗೆ ಕೊಡಬೇಡಿ.‌ಇದೊಂದು ದುರಂತ ಆಗಬಾರದಿತ್ತು. ನನ್ನ ಇಲಾಖೆಯಿಂದ ಕೆಲವು ಕಠಿಣವಾದ ನಿಲುವು ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ-https://suddilive.in/archives/5864

Related Articles

Leave a Reply

Your email address will not be published. Required fields are marked *

Back to top button