ಕ್ರೈಂ ನ್ಯೂಸ್
ತನಿಖಾಧಿಕಾರಿ ಎಂದು ಎಣ್ಣೆ ಅಂಗಡಿ ಮಾಲೀಕನಿಗೆ ಜೀವಬೆದರಿಕೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಅಣ್ಣಾ ನಗರದಲ್ಲಿ ತನಿಖಾಧಿಕಾರಿಗಳು ಎಂದು ಹೋಗಿ ವೈನ್ ಶಾಪ್ ಮಾಲೀಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಅಣ್ಣಾ ನಗರದ ವಿಕ್ಟರಿ ವೈನ್ ಶಾಪ್ ನಲ್ಲಿ ಕಳ್ಳ ಮಾಲು ಮಾರುತ್ತಿದ್ದೀಯ ಎಂದು ಇರ್ಫಾನ್ ಮತ್ತು ಮುಬಾರಕ್ ಎಂಬ ಇಬ್ಬರು ವೈನ್ ಶಾಪ್ ಒಳಗೆ ನುಗ್ಗಿದ್ದಾರೆ. ಇಲ್ಲವಾದಲ್ಲಿ ದಿನಾಲು ಕುಡಿಯಲು ಎಣ್ಣೆ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ.
ವೈನ್ ಶಾಪ್ ನ ಮಾಲೀಕರಾದ ಎಸ್ ಎನ್ ಕುಮಾರ್ ನಾನು ಹಲವಾರು ವರ್ಷದಿಂದ ಇಲ್ಲೇ ಇದ್ದೀನಿ ಯಾವಕಳ್ಳ ಮಾಲು ಮಾರೋದಿಲ್ಲ ಎಂದು ಹೇಳುತ್ತಿದ್ದಂತೆ, ಇರ್ಫಾನ್ ಮತ್ತು ಮುಬಾರಕ್ ಬ್ರಾಂದಿ ಬಾಟಲ್ ಎತ್ತಿಕೊಳ್ಳಲು ಮುಂದಾಗಿದ್ದಾರೆ.
ಇವರನ್ನ ತಡೆಯಲು ಮುಂದಾದ ಕುಮಾರ್ ನೂಕು ನುಗ್ಗಲಿನಲ್ಲಿ ಇರ್ಫಾನ್ ನ ಕಿವಿಗೆ ತರಿಚಿದಂತಾಗಿದೆ. ಇದರಿಂದ ಕೋಪಗೊಂಡ ಇರ್ಫಾನ್ ಮಾಲೀಕರಿಗೆ ಜೀವಬೆದರಿಕೆ ಹಾಕಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/8661