ಗುರುತು ಪತ್ತೆ
ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಭದ್ರಾವತಿಯ FCI ಬಳಿ ಅಪರಿಚಿತನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು ಆತನ ಗುರುತು ಪತ್ತೆಯಾಗಿದೆ.
ಭದ್ರಾವತಿ-ಮೊಸರುಹಳ್ಳಿ ರೈಲ್ವೆ ಟ್ರಾಕ್ ಮೇಲೆ ಅಪರಿಚಿತನೋರ್ವನ ಶವವೊಂದು ಪತ್ತೆಯಾಗಿತ್ತು. ಈ ಘಟನೆ ನಡೆದ ಮರುದಿನ ಭದ್ರಾವತಿಯ FCI ಬಳಿ ಮತ್ತೋರ್ವನ ಶವ ಪತ್ತೆಯಾಗಿತ್ತು. ಜೀವನದಲ್ಲಿ ಬೇಸರಗೊಂಡವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮತ್ತು ಅಪರಿಚತನ ಗುರುತು ಪತ್ತೆಯಾಗದ ಕುರಿತು ಸುದ್ದಿಲೈವ್ ಸುದ್ದಿ ಮಾಡಿತ್ತು
ಸುದ್ದಿಯ ಪರಿಣಾಮವಾಗಿ ಮೃತನ ಪತ್ತೆಯಾಗಿದೆ. ಸುದ್ದಿಲೈವ್ ನ್ಯೂಸ್ ವೆಬ್ ಸೈಟ್ ಗೆ ಧನ್ಯವಾದ ತಿಳಿಸಲಾಗಿದೆ. ಪತ್ತೆಯಾದ ಹಿನ್ನಲೆಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಮೃತನನ್ನ ಭದ್ರಾವತಿ ತಾಲೂಕ್ ದಾಸರ ಕಲ್ಲಳ್ಳಿ ಗ್ರಾಮದ ಹಾಲಪ್ಪ ಎಂದು ಗುರುತು ಹಿಡಿಯಲಾಗಿದೆ. ಈತನಿಗೆ ಸುಮಾರು ವರ್ಷಗಳಿಂದ ಚರ್ಮ ರೋಗ ಖಾಯಿಲೆ ಇದ್ದು ಕಾಯಿಲಿಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/5453