ಕ್ರೈಂ ನ್ಯೂಸ್

ಲೇ ಔಟ್ ನಲ್ಲಿ ಪತ್ತೆಯಾದ ಬಂಡೆ ತೆರವಿಗೆ ಸ್ಪೋಟಕ ಬಳಕೆ-ಅರೆಸ್ಟ್

ಸುದ್ದಿಲೈವ್/ಶಿವಮೊಗ್ಗ

ಲೇಔಟ್ ನಿರ್ಮಾಣ ಮಾಡುವಾಗ ಅಡ್ಡ ಬಂದ ಬಂಡೆಕಲ್ಲನ್ನ ಅನುಮತಿ ಇಲ್ಲದೆ ಸ್ಪೋಟಕ ವಸ್ತುಗಳನ್ನ ಬಳಸಿ ತೆಗೆಯಲು ಮುಂದಾದ ವ್ಯಕ್ತಿಯನ್ನ‌ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಬೊಮ್ಮನಕಟ್ಟೆ ಶಿವಾನಿ ಲೇ ಔಟ್ ನಲ್ಲಿ ಅಕ್ರಮವಾಗಿ ಟ್ರಾಕ್ಟರ್ ಕಂಪೋಸರ್ ಬಳಸಿ ಸ್ಪೋಟಕಗಳನ್ನು ಇಟ್ಟು ಬಂಡೆ ಸಿಡಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ವಿನೋಬ ನಗರ ಪಿಐ ಚಂದ್ರಕಲಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.‌

ಬೊಮ್ಮನಕಟ್ಟೆ ಶಿವಾನಿ ಲೇ ಔಟ್ ನ ಮಾಲೀಕ ಆನಂದ್ ಎಂಬುವವರು ಮನು @ ಮನೋಹರ್ ಎಂಬುವವನೊಂದಿಗೆ ಸ್ಪೋಟಕಗಳನ್ನು ಬಳಸಿ ಬಂಡೆಗಳನ್ನು ಸಿಡಿಸುತ್ತಿದ್ದಾರೆ ಎಂಬ ಬಗ್ಗೆ ಗುಪ್ತ ಮಾಹಿತಿಯ ಆಧಾರದ ಮೇರೆಗೆ ದಾಳಿ ನಡೆದಿದೆ.

ಸೂಳೆಬೈಲಿನ ನಿವಾಸಿ ಮನು @ ಮನೋಹರ್ ತಂದೆ ಮಲ್ಲೇಶಪ್ಪ, (30) ಆನಂದ ಎಂಬುವರ ಜಮೀನಿನಲ್ಲಿ ಕೆಎ 14 ಟಿ 7329 ನೊಂದಣಿ ಸಂಖ್ಯೆಯ ಟ್ರಾಕ್ಟರ್ ನ್ನ ಬಳಸಿ, ಸ್ಪೋಟಕವನ್ನ ಬಳಸಿ ಬಂಡೆಯನ್ನ ತೆಗೆಯುತ್ತಿರುವುದಾಗಿ ತಿಳಿಸಿದಾಗ ಪೊಲೀಸರು ಮನೋಹರನನ್ನ‌ ವಶಕ್ಕೆ ಪಡೆದಿದ್ದಾರೆ.

ಬಂಧಿಸಲ್ಪಟ್ಟ ಮನೋಹರ್ ಗೆ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ-https://suddilive.in/archives/13524

Related Articles

Leave a Reply

Your email address will not be published. Required fields are marked *

Back to top button