ಕ್ರೈಂ ನ್ಯೂಸ್

ಲವ್ ಬರ್ಡ್ ಗಳನ್ನ ಒಂದು ಮಾಡದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಸುದ್ದಿಲೈವ್/ಶಿವಮೊಗ್ಗ

ಪುರಲೆ ವೃತ್ತದಲ್ಲಿ ವೈಯುಕ್ತಿಕ ಕಾರಣಕ್ಕೆ ಯುವಕನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದು ಆತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ನಾಲ್ವರನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಪುರೆ ವೃತ್ತದಲ್ಲಿ ಶ್ರೀನಿವಾಸ ಎಂಬ ಯುವಕನ ಮೇಲೆ ಸಂತೋಷ ಯಾನೆ ಡೇಂಜರ್, ರಂಗ ಯಾನೆ ಬಂಕ್, ನಿತೇಶ್ ಯಾನೆ ಕರಿಯ, ಪ್ರವೀಣ್ ಯಾನೆ ಟಕ್ಲು ಎಂಬುವರು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಶ್ರೀನಿವಾಸನಿಗೆ ತಲೆಗೆ ಮತ್ತು ಕಿವಿಗೆ ಹೊಡೆತ ಬಿದ್ದಿದ್ದು ಶ್ರೀನಿವಾಸನನ್ನ‌ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಶ್ರೀನಿವಾಸನ ಮೇಲೆ ಹಲ್ಲೆನಡೆಸಲು ಒಂದು ಪ್ರೇಮ್ ಕಹಾನಿ ತಗಲಿಹಾಕಿಕೊಂಡಿದೆ. ಕಳೆದ ಎರಡು ಮೂರು ದಿನಗಳ ಹಿಂದೆ  ಕೇಶವ ಮತ್ತು ಆತನ ಪ್ರಿಯತಮೆಯ ಪ್ರೇಮ್ ಕಹಾನಿ ತಗಲಾಕೊಂಡಿದೆ. ದೇವಸ್ಥಾನದಲ್ಲಿ ಪ್ರೀತಿಯ ಜೋಡಿಯನ್ನ ಒಂದು ಮಾಡಿಸಲು ಶ್ರೀನಿವಾಸ ಮುಂದು ನಿಂತು ಮದುವೆ ಮಾಡಿಸಿದ್ದಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಹಲ್ಲೆ ನಡೆಸಿದ ಸಂತೋಷ ಯಾನೆ ಡೇಂಜರ್, ರಂಗ ಯಾನೆ ಬಂಕ್, ನಿತೇಶ್ ಯಾನೆ ಕರಿಯ, ಪ್ರವೀಣ್ ಯಾನೆ ಟಕ್ಲು ಎಂಬುವರ ವಿರುದ್ಧ ದೂರು ದಾಖಲಾಗಿದೆ.‌  ಸೆಕ್ಷನ್ 307 ಪ್ರಕರಣದಲ್ಲಿ ಈ ನಾಲ್ವರನ್ನ‌ ಬಂಧಿಸಲಾಗಿದೆ.‌ ಈ ನಾಲ್ವರ ವಿರುದ್ಧ ಯಾವ ಕೇಸು ಇಲ್ಲವೆಂದು ತಿಳಿದು ಬಂದಿದೆ. ಆದರೆ ಇಂದು ನಡೆದ ಮಾರಣಾಂತಿಕ ಹಲ್ಲೆಯಂತಹ ಘಟನೆ ಅವರಿಗೆ ಸಂಕಷ್ಟವನ್ನ ತಂದೊಡ್ಡಿದೆ.

ಇದನ್ನೂ ಓದಿ-https://suddilive.in/archives/5299

Related Articles

Leave a Reply

Your email address will not be published. Required fields are marked *

Back to top button