ಕ್ರೈಂ ನ್ಯೂಸ್
ಡಿವೈಎಸ್ಪಿ ಬಾಲರಾಜ್ ಜಾಗಕ್ಕೆ ಜೆ.ಜೆ ತಿರುಮಲೆಶ್ ವರ್ಗಾವಣೆ
ಸುದ್ದಿಲೈವ್/ಶಿವಮೊಗ್ಗ
ಡಿವೈಎಸ್ಪಿ ಬಾಲರಾಜ್ ಅವರ ಸ್ಥಾನಕ್ಕೆ ಜೆ.ಜೆ.ತಿರುಮಲೆಶ್ ಅವರನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಬಾಲರಾಜ್ ಅವರನ್ನ ಬಿಟ್ ಕಾಯಿನ್ ಪ್ರಕರಣದ ವಿಶೇಷ ಅಧಿಕಾರಿಯನ್ನಾಗಿ ನೆಮಿಸಿ ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.
ಡಿವೈಎಸ್ಪಿ ತಿರುಮಲೇಶ್ ಶಿವಮೊಗ್ಗಕ್ಕೆ ಹೊಸಬರಲ್ಲ. ಭದ್ರಾವತಿಯಲ್ಲಿ ಸಿಪಿಐ ಆಗಿ 3 ವರ್ಷ ಸೇವೆ ಮಾಡಿದ ಅನುಭವವಿದೆ. ಚಿಕ್ಕಮಗಳೂರಿನ ಲೋಕಯುಕ್ತ ಡಿವೈಎಸ್ಪಿ ಆಗಿದ್ದ ತಿರುಮಲೇಶ್ ಶಿವಮೊಗ್ಗ ಉಪವಿಭಾಗ-ಎ ಭಾಗಕ್ಕೆ ವರ್ಗಾಯಿಸಲಾಗಿದೆ.
ಭದ್ರಾವತಿಯಲ್ಲಿರುವಾಗಲೇ ಇವರ ವಿರುದ್ಧ ಆರೋಪಗಳು ಕೇಳಿಬಂದು ಅಮಾನತ್ತಾಗಿದ್ದರು. ಈಗ ಮತ್ತೆ ಶಿವಮೊಗ್ಗಕ್ಕೆ ಬಂದಿದ್ದಾರೆ. ಇವರ ಕಾರ್ಯವೈಖರಿ ಹೇಗಿರುತ್ತೆ ಕಾದು ನೋಡಬೇಕಿದೆ. 33 ಡಿವೈಎಸ್ಪಿ ಮತ್ತು 132 ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದ್ದು, ಅದರಂತೆ ಜೆಜೆ ತಿರುಮಲೇಶ್ ಡಿವೈಎಸ್ಪಿ ಆಗಿ ಆಗಮಿಸಿದ್ದಾರೆ.
ಇದನ್ನೂ ಓದಿ-https://suddilive.in/archives/8006