ಸ್ಥಳೀಯ ಸುದ್ದಿಗಳು

ಪ್ರತಿಭಟನೆ ವೇಳೆ ರಸ್ತೆ ಅಪಘಾತ

ಸುದ್ದಿಲೈವ್/ಶಿವಮೊಗ್ಗ

ಉಭಯ ಸದನದಿಂದ 142 ಸಂಸದರನ್ನ ಅಮಾನತ್ತುಗೊಳಿಸಿರುವುದನ್ನ ಖಂಡಿಸಿ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಮಹಿಳಾ ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ.

ಕಾಂಗ್ರೆಸ್ ಪ್ರತಿಭಟನೆ ವೇಳೆ ಯಾವುದೇ ಸಿಗ್ನಲ್ ಗಳು ಬಂದ್ ಆಗಿರಲಿಲ್ಲ. ಸಿಗ್ನಲ್ ಬಿಟ್ಟ ಕಾರಣ ಮಹಾವೀರ ವೃತ್ತದ ಬಳಿ ಸವಳಂಗ ರಸ್ತೆ ಕಡೆಯಿಂದ ಬಂದ ಮಹಿಳಾ ಸವಾರರು ಚಾಲನೆ ಮಾಡಿಕೊಂಡು ಬಂದಿದ್ದಾರೆ.‌ ಆದರೆ ಇದೇವೇಳೆ ಬಾಲರಾಜ್ ಅರಸ್ ರಸ್ತೆಕಡೆಯಿಂದ ದ್ವಿಚಕ್ರ ವಾಹನ ಸವಾರರು ಮುಂದಾಗಿದ್ದ ಪರಿಣಾಮ ಅಪಘಾತ ಸಂಭವಿಸಿದೆ.

ಈ ವೇಳೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಇನ್ನೂ ಮುಗಿದಿರಲಿಲ್ಲ. ಅಪಘಾತದ ವೇಳೆ ಮಹಿಳಾ ದ್ವಿಚಕ್ರವಾಹನ ಸವಾರರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳಾ ಬೈಕ್ ಸವಾರರು ಆರ್ ಟಿ ಒದಲ್ಲಿ ನೌಕರರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಪ್ರತಿಭಟನಾಕಾರರು ಮಹಿಳಾ ಬೈಕ್ ಸವಾರರನ್ನ‌ ಉಪಚರಿಸಿದ್ದಾರೆ.

ಇದನ್ನೂ ಓದಿ-https://suddilive.in/archives/5258

Related Articles

Leave a Reply

Your email address will not be published. Required fields are marked *

Back to top button