ಭದ್ರಾವತಿಯ ಅಕ್ರಮ ಚಟುವಟಿಕೆಯ ವಿರುದ್ಧ ಹಿಂಜಾವೇ ಪ್ರತಿಭಟನೆ
ಸುದ್ದಿಲೈವ್/ಶಿವಮೊಗ್ಗ/ಡಿ.20/2023
ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ
ಜಾಗರಣ ವೇದಿಕೆ ವತಿಯಿಂದ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಗೋವು ಕಸಾಯಿಕಾನೆಗಳು, ಗೋವು ಮಾಂಸದ ಹೋಟೆಲ್ಗಳು ಅಕ್ರಮವಾಗಿ ಗೋವು ಸಾಗಾಟ, ಎಗ್ಗಿಲ್ಲದೆ ನಡೆಯುತ್ತಿದ್ದರು ಇದನ್ನು ಕಾಣದಂತೆ ಪೊಲೀಸ್ ಇಲಾಖೆ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ನಗರ ಮತ್ತು ಹಳ್ಳಿಯ ಬೀದಿಗಳಲ್ಲಿ ರಾಜರೋಷವಾಗಿ ಓ.ಸಿ., ಮಟ್ಕ ಮತ್ತು ಗಾಂಜಾ ದಂಧೆಗಳು ಹಾಗೂ ಭದ್ರಾವತಿ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್,
ತೂರುಬಿಲ್ಲೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಯುವಸಮಾಜ ಬಲಿಯಾಗುತ್ತಿದ್ದು, ಈ ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕಾನೂನು ಬಾಹಿರ
ಚಟುವಟಿಕೆಗಳ ಮೇಲೆ ನಿಧ್ರ್ಯಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದೇವರಾಜ್ ಹರಳಿಹಳ್ಳಿ, ಉಮೇಶ್ ಗೌಡ, ವಿನಯ್, ಅಜಯ್, ಪವನ
ಮೊದಲಾದವರು ಇದ್ದರು.
ಇದನ್ನೂ ಓದಿ-https://suddilive.in/archives/5123