ದೇವಸ್ಥಾನ ಮತ್ತು ಬೀಗ ಹಾಕಿದ್ದ ಮನೆಗಳೇ ಈತನ ಟಾರ್ಗೆಟ್!
ಸುದ್ದಿಲೈವ್/ಶಿವಮೊಗ್ಗ
ಅನುಮಾನಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನ ಪೊಲೀಸರು ವಿಚಾರಿಸಿದಾಗ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ಖರ್ನಾಕ್ ಕಳ್ಳನೋರ್ವ ಸಿಕ್ಕಿ ಹಾಕಿಕೊಂಡಿದ್ದಾನೆ. ದೇವಸ್ಥಾನಗಳು ಮತ್ತು ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್!
ನಿನ್ನೆ ನ್ಯೂಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬೆಳ್ಳಂಬೆಳಿಗ್ಗೆ ಕೂಲಿಬ್ಲಾಕ್ ನ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಾರಿಯಮ್ಮನ ದೇವಸ್ಥಾನದ ಬಳಿ ಮುಖಕ್ಕೆ ಕರವಸ್ತ್ರ ಧರಿಸಿ ಕಳ್ಳತನ ನಡೆಸಲು ಓರ್ವ ವ್ಯಕ್ತಿ ಹೊಂಚು ಹಾಕಿ ಕುಳಿತಿದ್ದ.
ಮಾರಿಯಮ್ಮ ದೇವಸ್ಥಾನದ ಹತ್ತಿರ ಅಪರಿಚಿತನೋರ್ವ ನಿಂತುಕೊಂಡು ಅನುಮಾನ ಬರುವಂತೆ ಮುಖವನ್ನು ತನ್ನ ಕರವಸ್ತ್ರದಿಂದ ಮುಚ್ಚಿಕೊಂಡು, ಸಮವಸ್ತ್ರದಲ್ಲಿದ್ದ ಪೊಲೀಸರನ್ನ ನೋಡಿ ತನ್ನ ಮುಖ ಮರೆಮಾಚಿಕೊಂಡು ಹಿಂದಿರುಗಿ ಬಿ.ಕೆ ಸರ್ಕಲ್ ಕಡೆಗೆ ಓಡಿ ಹೋಗುತ್ತಿದ್ದ ವೇಳೆ ಪೊಲೀಸರು ಅಡ್ಡಹಾಕಿ ವ್ಯಕ್ತಿಯನ್ನ ವಿಚಾರಿಸಿದ್ದಾರೆ.
ಹೆಸರು ವಿಳಾಸವನ್ನು ಕೇಳಿದ ಪೊಲೀಸರಿಗೆ ಅಪರಿಚಿತ ವ್ಯಕ್ತಿ ತನ್ನ ಹೆಸರು ವಿಲ್ಡನ್ ಎಂದು, ಮತ್ತೊಮ್ಮೆ ವಿಲಿಯಂ ಎಂದು ತಿಳಿಸಿದ್ದಾನೆ, ಪೊಲೀಸರ ಖದರ್ ಗೆ ಹೆಸರು ವಿಳಾಸವನ್ನ ಬಾಯಿಬಿಟ್ಟಿದ್ದಾನೆ. ಆಂಥೋನಿ ಮೆಲ್ವಿನ್ ತಂದೆ ಜಯರಾಜ್ (21) ಪೆಂಟೀಂಗ್ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಹುತ್ತಾಕಾಲೋನಿಯ ಸಹ್ಯಾದ್ರಿ ಶಾಲೆ ಹಿಂಭಾಗ, ವಿಐಎಸ್ ಕ್ವಾಟರ್ಸ ನ ನಿವಾಸಿ ಎಂದು ವಿಳಾಸವನ್ನೂ ತಿಳಿಸಿದ್ದಾನೆ, ಇಲ್ಲೇನು ಮಾಡುತ್ತಿದ್ದೀಯ ಎಂದು ಕೇಳಿದಾಗ ಯಾವುದಾರರು ದೇವಸ್ಥಾನಗಳು, ಬೀಗ ಹಾಕಿದ ಮನೆಗಳನ್ನು ಬೀಗ ಮುರಿದು ಕಳ್ಳತನ ಮಾಡುವ ಉದ್ದೇಶದಿಂದ ಬಂದು ಹೊಂಚು ಹಾಕುತ್ತಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಮುಖಕ್ಕೆ ಕರ್ಚೀಫ್ ಹಾಕಿಕೊಂಡು ಕಳ್ಳತನಕ್ಕೆ ಸಂಚುಹಾಕಿದ್ದ ವ್ಯಕ್ತಿಯನ್ನ ಪೊಲೀಸರು ನಿನ್ನೆ ಬೆಳಿಗ್ಗೆ, 5.00ಗೆ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ-https://suddilive.in/archives/4263