ರಾಜಕೀಯ ಸುದ್ದಿಗಳು

ಪೆಸಿಟ್ ಕಾಲೇಜು ತಲುಪಿದ ಬೈಕ್ ರ್ಯಲಿ, ಇಬ್ಬರು ಪ್ರಮುಖರು ಗೈರು

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ್ದು, ಬೆಕ್ಕಿನ ಕಲ್ಮಠದಲ್ಲಿ ಸನ್ಮಾನ ಸ್ವೀಕರಿಸಿ ಪೆಸಿಟ್ ಕಾಲೇಜಿಗೆ ಬೈಕ್ ರ್ಯಾಲಿ ಆರಂಭಗೊಂಡಿದೆ. 1 ವರೆ ಗಂಟೆ ನಂತರ ಕಾಲೇಜು ತಲುಪಿದೆ.

ಬಿಜೆಪಿಯ ಬೈಕ್ ರ್ಯಾಲಿಗೆ ತೆರದ ಲಾರಿಯಲ್ಲಿ ಆಗಮಿಸಿದ ರಾಜ್ಯಧ್ಯಕ್ಷ ಬಿ.ವೈ.ವಿಜೇಂದ್ರರಿಗೆ ತಂದೆ ಬಿಎಸ್ ವೈ, ಈಶ್ವರಪ್ಪ, ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಹರತಾಳ ಹಾಲಪ್ಪ, ಎಂಎಲ್ ಸಿ ಡಿ‌ಎಸ್.ಅರುಣ್ ಮೊದಲಾದ ನಾಯಕರು ಸಾಥ್ ನೀಡಿದರು.

ಬೆಕ್ಕಿನಕಲ್ಮಠದಲ್ಲಿ ಜೆಸಿಬಿ ಮೂಲಕ ಸೇಬಿನ ಹಾರ ಹಾಕಲಾಯಿತು. ನಂತರ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಬಿ ಹೆಚ್ ರಸ್ತೆಯ ಮೂಲಕ ಎಎ ವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಜೈಲ್ ವೃತ್ತ ಕುವೆಂಪು ರಸ್ತೆಮೂಲಕ ಸಾಗರ ರಸ್ತೆಯಿಂದ ಬೈಕ್ ರ್ಯಾಲಿ ಪೆಸಿಟ್ ಕಾಲೇಜು ತಲುಪಿದೆ.

ಕಾಲೇಜಿಗೆ ವಿಜೇಂದ್ರರ ವಾಹನ ಬರುತ್ತಿದ್ದಂತೆ ಕಾಲೇಜಿನ ಸಭಾಂಗಣದ  ವೇದಿಕೆಯ ವರೆಗೆ ವಾದ್ಯಗಳ ಮೂಲಕ ಕರೆತರಲಾಯಿತು. ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬೈಕ್ ರ್ಯಾಲಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಾಲೇಜಿನಲ್ಲಿ ನಡೆದ ವೇದಿಕೆಯ ಮೇಲೆ ಹಾಜರಿದ್ದರು. ಹಾಗೂ ಸೊರಬದ ಕುಮಾರ ಬಂಗಾರಪ್ಪ ಗೈರು ಹಾಜರಾತಿ ಎದ್ದುಕಾಣುತ್ತಿತ್ತು.

ಶಾಸಕರ ತಲೆಗೆ ಹೊಡೆದ ಹೂವಿನ ಹಾರದ ಕೋಲು

ಬೈಕ್ ರ್ಯಾಲಿ ಗೋಪಿ ವೃತ್ತ ತಲುಪಿದೆ. ಈ ವೇಳೆ ತೆರದ ವಾಹನದ ಮೇಲಿದ್ದ ರಾಜ್ಯಾಧ್ಯಕ್ಷ ವಿಜೇಂದ್ರರಿಗೆ ಹೂವಿನ ಹಾರ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಜೆಸಿಬಿ ಮೂಲಕ ಹಾಕಲಾಗಿತ್ತು. ಆದರೆ ಕಾರ್ಯಕರ್ತರು ಮೊಬೈಲ್ ನಲ್ಲಿ ಫೋಟೆ ತೆಗೆದುಕೊಂಡರು. ನಂತರ ಹೂವಿನ ಹಾರದ ಕೋಲನ್ನ ಬಿಚ್ಚಲು ಮುಂದಾದಗ ಹಾರದ ಕೋಲು ಹೊಡೆತ ಬಿದ್ದಿದೆ.

ಇದನ್ನೂ ಓದಿ-https://suddilive.in/archives/3913

Related Articles

Leave a Reply

Your email address will not be published. Required fields are marked *

Back to top button