ಸಭೆಯಿಂದ ಹೊರ ನಡೆದ್ರಾ ಶಾಸಕರು?
ಸುದ್ದಿಲೈವ್/ಶಿವಮೊಗ್ಗ
ಬೆಕ್ಕಿನ ಕಲ್ಮಠದ ಸಭೆಯಿಂದ ಶಾಸಕ ಚೆನ್ನಬಸಪ್ಪ ಮುನಿಸಿಕೊಂಡು ವಾಪಾಸ್ ಹೋದ್ರಾ ಎಂಬ ಅನುಮಾನ ಎಡೆಮಾಡಿಕೊಟ್ಟಿದೆ.
ಈಶ್ವರಪ್ಪನವರ ಮನೆಯಿಂದ ಮಾಜಿ ಸಚಿವ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್, ಮಾಜಿಸಚಿವರಾಸಹರತಾಳ ಹಾಲಪ್ಪ ಈಶ್ವರಪ್ಪ, ಶಾಸಕ ಚೆನ್ನಬಸಪ್ಪ ಟಿ.ಡಿ.ಮೇಘರಾಜ್ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಒಟ್ಟಿಗೆ ಫಾರ್ಚ್ಯೂನರ್ ಕಾರ್ ನಲ್ಲಿ ಬೆಕ್ಕಿನಕಲ್ಮಠಕ್ಕೆ ಆಗಮಿಸಿದರು.
ಈ ವೇಳೆ ರಾಜಾದ್ಯಕ್ಷ ವಿಜೇಂದ್ರರಿಗೆ ಮಠದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆದಿದೆ. ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಚೆನ್ನಬಸಪ್ಪನವರನ್ನ ಕೆಳಗೆ ಕೂತಿದ್ದರು. ವೇದಿಕೆ ಮೇಲೆ ಮಾಜಿ ಸಚಿವರಾದ ಹಾಲಪ್ಪ ಈಶ್ವರಪ್ಪ ಯಡಿಯೂರಪ್ಪ ಡಾ.ಮುರುಘರಾಜೇಂದ್ರ ಸ್ವಾಮಿಗಳು ಡಾ.ಧನಂಜಯ ಸರ್ಜಿ ಕುಳಿತಿದ್ದರು.
ವೇದಿಕೆ ಮೇಲೆ ಮತ್ತೋರ್ವ ನಾಯಕನನ್ನ ಕರೆಯಿಸಿ ಕೂರಿಸಲಾಯಿತು. ಆದರೆ ಶಾಸಕರು ಕೆಳಗೆ ಕುಳಿತಿದ್ದರೂ ಕರೆಯದ ಕಾರಣ ಶಾಸಕ ಚೆನ್ನಬಸಪ್ಪ ರಾಜ್ಯಾಧ್ಯಕ್ಷರ ಸನ್ಮಾನ ನಡೆಯಿತ್ತಿದ್ದಂತೆ ವೇದಿಕೆ ಮೇಲೆ ಕರೆಯದ ಹಿನ್ನಲೆಯಲ್ಲಿ ಶಾಸಕರು ಸಭೆಯಿಂದ ಹೊರ ನಡೆದಿದ್ದಾರೆ. ನಂತರ ಬೈಕ್ ರ್ಯಾಲಿಯಲ್ಲಿ ಶಾಸಕರು ಭಾಗಿಯಾದರು
ಇದನ್ನೂ ಓದಿ-https://suddilive.in/archives/3910