ರಾಜಕೀಯ ಸುದ್ದಿಗಳು
ಈಶ್ವರಪ್ಪನವರ ಕಾಲಿಗೆ ನಮಸ್ಕರಿಸಿದ ರಾಜ್ಯಾಧ್ಯಕ್ಷ
ಸುದ್ದಿಲೈವ್/ಶಿವಮೊಗ್ಗ
ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಮತ್ತೂರಿನಲ್ಲಿ ಆರ್ ಎಸ್ ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮತ್ತು ಬಿಜೆಪಿ ಮುಖಂಡ ಭಾನುಪ್ರಕಾಶ್ ಮನೆಗೆ ಭೇಟಿ ನೀಡಿ ನೇರವಾಗಿ ಮಾಜಿ ಸಚಿವ ಈಶ್ವರಪ್ಪನವರ ಮನೆಗೆ ಭೇಟಿ ನೀಡಿದರು.
ಈಶ್ವರಪ್ಪನವರ ಕಾಲಿಗೆ ನಮಸ್ಕರಿಸಿ ಆಶೀರ್ವಚನ ಪಡೆದ ರಾಜ್ಯಧ್ಯಕ್ಷರಿಗೆ ಮಾಜಿ ಸಚಿವರು ಸಿಹಿ ತಿನಿಸಿದರು. ಈ ವೇಳೆ ಟಿವಿ ವೀಕ್ಷಿಸುತ್ತಿದ್ದ ಈಶ್ವರಪ್ಪ, ಡಿಕೆಶಿ ಪ್ರಕರಣವನ್ನ ವೀಕ್ಷಸುತ್ತಿದ್ದರು. ಈ ವೇಳೆ ಸಿಕ್ಕಿಂ ಮುಖ್ಯಮಂತ್ರಿಗಳ ಪ್ರಕರಣವೂ ಸಚಿವ ಸಂಪುಟ ತೀರ್ಮಾನದಂತೆ ಸಿಬಿಐ ಪ್ರಕರಣ ಕೈಬಿಡುವಂತೆ ತೀರ್ಮಾನಿಸಿತ್ತು. ಕೋರ್ಟ್ ಸಚಿವಸಂಪುಟದ ತೀರ್ಮಾನವನ್ನ ಪರಿಗಣಿಸಿರಲಿಲ್ಲ ಎಂಬ ಮಾಹಿತಿಯನ್ನ ಹಂಚಿದರು.
ಇದನ್ನೂ ಓದಿ-https://suddilive.in/archives/3903