ಜಿಲ್ಲೆಯಲ್ಲಿ ಗೂಂಡಾರಾಜ್ ಜಾರಿಯಿದೆ-ಶಾಸಕ ಚೆನ್ನಬಸಪ್ಪ ಆರೋಪ
ಸುದ್ದಿಲೈವ್/ಶಿವಮೊಗ್ಗ
ಮೊನ್ನೆ ರಾತ್ರಿ ಬಿಜೆಪಿ ಹೊಸನಗರ ತಾಲೂಕು ಘಟಕದ ಯುವಮೋರ್ಚಾದ ಅಧ್ಯಕ್ಷ ನಗರ ನಿತಿನ್ ಮತ್ತು ಸಹೋದರ ನವೀನ್ ಮೇಲೆ ಹಲ್ಲೆಯಾಗಿದ್ದು ಇಬ್ಬರು ಸಹೋದರರ ಆರೋಗ್ಯ ವಿಚಾರಣೆಗೆ ಶಾಸಕ ಚೆನ್ನಬಸಪ್ಪ ಮೆಗ್ಗಾನ್ ಗೆ ಭೇಟಿ ನೀಡಿದ್ದರು.
ಬ್ಯಾನರ್ ವಿಚಾರದಲ್ಲಿ ನಗರ ನಿತಿನ್ ಮತ್ತು ಸಹೋದರ ನವೀನ್ ಮೇಲೆ ಕಾಂಗ್ರೆಸ್ ನ ಪ್ರಕಾಶ್ ಮತ್ತು ಸಂಗಡಿಗರಿಂದ ಮಾರಕಾಸ್ತ್ರಗಳಿಂದ ದಾಳಿ ನಡೆದಿದ್ದು ಇಬ್ವರನ್ನ ಮೆಗ್ಗಾನ್ ಗೆ ರವಾನಿಸಲಾಗಿತ್ತು.
ಇಂದು ಬೇಟಿ ನೀಡಿದ ಶಾಸಕ ಚೆನ್ನಬಸಪ್ಪ ಮಾಧ್ಯಮದೊಂದಿಗೆ ಮಾತನಡಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕರ್ನಾಟಕದಲ್ಲಿ ಗೂಂಡಾ ರಾಜ್ ನಡೆಯುತ್ತಲೇ ಬಂದಿದೆ, ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ನಮ್ಮ ಜಿಲ್ಲೆಯ ಹೊಸನಗರ ತಾಲೂಕಿನ ಯುವ ಮೋರ್ಚಾ ಅಧ್ಯಕ್ಷರಾದ ನಿತಿನ್ ಅವರ ಮೇಲೆ ಕಾಂಗ್ರೆಸ್ ಪಕ್ಷದ ಗೂಂಡಗಳಿಂದ ಹಲ್ಲೆ ಪ್ರಕರಣ ನಡೆದಿದೆ.
ದಿನದಿಂದ ದಿನಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಕಸರು ಗೂಂಡಾಗಳನ್ನಿಟ್ಟು ದಬ್ಬಾಳಿಕೆ ಮಾಡುತ್ತಿದ್ದು, ಕೆಳ ಹಂತದಲ್ಲಿ ಕಾಂಗ್ರೆಸ್ ಮುಖಂಡರೇ ಗೂಂಡಾಗಳಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಗೃಹ ಸಚಿವರು ಸುಮ್ಮನಿರುವುದು ದುರ್ದೈವದ ಸಂಗತಿ ಎಂದರು.
ಇದರಜೊತೆಗೆ ಹಾಗೂ ಹಲ್ಲೆಗೊಳಗಾಗಿ ಚಿಕಿತ್ಸೆಗಾಗಿ ದಾಖಲಾಗಿರುವ ಭದ್ರಾವತಿಯ ಕಾರ್ಯಕರ್ತ ಪರಮೇಶ್ ಅವರ ಆರೋಗ್ಯವನ್ನು ವಿಚಾರಿಸಿ, ಅವರಿಗೆ ಧೈರ್ಯ ತುಂಬುವಂತ ಕೆಲಸವನ್ನು ಮಾಡಿದರು.
ಇದನ್ನೂ ಓದಿ-https://suddilive.in/archives/6018