ಪಕ್ಷದಿಂದ ಉಚ್ಚಾಟನೆ ಸ್ವಾಗತ-ಈಶ್ವರಪ್ಪ
ಸುದ್ದಿಲೈವ್/ಶಿವಮೊ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಒಳ್ಳೆಯದು ಆಯ್ತು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪುನರ್ ಉಚ್ಚರಿಸಿದ್ದಾರೆ.
ಮಾಧ್ಯಮಗಳಿಗೆ ಉತ್ತರ ನೀಡಿದ ಅವರು ಪದೇ ಪದೇ ನನ್ನ ಸ್ಪರ್ಧೆ ಬಗ್ಗೆ ಬಿಜೆಪಿ ನಾಯಕರಿಂದ ಅಪಪ್ರಚಾರ ಆಗ್ತಾ ಇದೆ. ಈಗ ಚುನಾವಣೆ ಸ್ಪರ್ಧೆ ದಾರಿ ಸುಗಮ ಆಗಿದೆ.ನನ್ನ ಸ್ಪರ್ಧೆ ಇದ್ದ ಎಲ್ಲ ಗೊಂದಲ ನಿವಾರಣೆ ಆಗಿದೆ ಎಂದರು.
ನನಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಬೆಂಬಲ ದೊರೆಯುತ್ತಿದೆ. ನನ್ನ ಸಿದ್ದಾಂತ ನೋಡಿ ಅವರು ಬೆಂಬಲ ನೀಡುತ್ತಿದ್ದಾರೆ.ಅವರೆಲ್ಲರೂ ದೇವರ ಮೇಲೆ ಆಣೆ ಮಾಡಿ ನನಗೆ ಮತ ಹಾಕುವುದಾಗಿ ಹೇಳಿದ್ದಾರೆ.ನಿನ್ನೆ ಹೊಸನಗರದ ತಾಲೂಕಿನ ಅನೇಕ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ನನಗೆ ಬೆಂಬಲನೀಡಿದ್ದಾರೆ ಎಂದರು.
ಗೀತಾ ಶಿವರಾಜ್ ಕುಮಾರ್ ನನ್ನ ಸಹೋದರಿ ಇದ್ದಂಗೆ ಎಂದು ಪುನರ್ ಉಚ್ಚರಿಸಿರುವ ಈಶ್ವರಪ್ಲ, ನಾನು ಎಲ್ಲಿಯೂ ಅವರಿಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಮಧು ಬಂಗಾರಪ್ಪ ಅವರಿಗೆ ತಪ್ಪು ಗ್ರಹಿಕೆ ಆಗಿದೆ
ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ವೈ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಕುರಿತು ನಾನು ಪ್ರಸ್ತಾಪಿಸಿದ್ದೆ. ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಈ ಹಿನ್ನಲೆಯಲ್ಲಿ ನಾನು ಚುನಾವಣೆ ಸ್ಪರ್ಧಿಸುತ್ತಿರುವೆ. ನಾನು 35 ವರ್ಷದಿಂದ ಕಟ್ಟಿದ ಪಕ್ಷ ದಿಂದ ನನ್ನ ಉಚ್ಚಾಟನೆ ಆಗಿದೆ ಎಂದರು.
ಇದರಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ನೋವು ಆಗಿದೆ. ನನಗೆ ಅನೇಕ ಮಠಾಧೀಶರು ಕರೆ ಮಾಡಿ ಉಚ್ಚಾಟನೆ ಗೆ ಬೇಸರ ಹೊರ ಹಾಕಿದ್ದಾರೆ. ಮಠ ಮತ್ತು ಸ್ವಾಮೀಜಿಗಳು ಅಂದ್ರೆ. ನನಗೆ ತುಂಬಾ ಭಕ್ತಿಯಿದೆ.
ಇಂದು ನಿರ್ಮಲಾನಂದ ಶ್ರೀಗಳ ಭೇಟಿ ಮಾಡಿರುವೆ. ಅವರು ಕೂಡಾ ನನಗೆ ಆಶೀರ್ವಾದ ಮಾಡಿದ್ದಾರೆ. ಅನೇಕ ಸ್ವಾಮೀಜಿಗಳು ನನ್ನ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದು ನಾನು ಲೋಕಸಭೆಗೆ ಹೋಗುತ್ತೇನೆ. ಮತ್ತೆ ಮೋದಿ ಕೈ ಬಲ ಪಡಿಸುತ್ತೇನೆ. ಕ್ಷೇತ್ರದಲ್ಲಿ ದಿನೇ ದಿನೇ ನನ್ನ ಪರ ಬೆಂಬಲ ಜಾಸ್ತಿ ಆಗುತ್ತಿದೆ ಎಂಬ ವಿಶ್ವಾಸ ಹೊರಹಾಕಿದರು.
ಇದನ್ನೂ ಓದಿ-https://suddilive.in/archives/13550