ಸ್ಥಳೀಯ ಸುದ್ದಿಗಳು

ವಿಮಾನ ನಿಲ್ದಾಣದಲ್ಲಿ ಗ್ರಾಮಸ್ಥರ ದಿಡೀರ್ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಮಾಡಬೇಕು ಎಂಬ ನಿರ್ಧಾರದ ಬೆನ್ನಲ್ಲೇ ಸ್ಥಳೀಯ ಗ್ರಾಮಸ್ಥರಿಂದ ಸಂಕಷ್ಟ ಎದುರಾಗಿದೆ. ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ನವರು ಇಂದು ಬೆಳಗ್ಗೆಯಿಂದ ಜೈಲ್ ಗೆ ಹೋಗುವ  ರಸ್ತೆಯನ್ನ ಬಂದ್ ಮಾಡಿದ ಕಾರಣ ಗ್ರಾಮಸ್ಥರು ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕಾರಣ ಓತಿಘಟ್ಟದ ಜೈಲ್ ರಸ್ತೆ ಬಂದ್ ಮಾಡುವುದರಿಂದ ಸಿದ್ಧನಗುಡಿ ಸಿರಿಯೂರು ಗ್ರಾಮಗಳಿಗೆ ಹೋಗಲು ಸುತ್ತಾಡಿಕೊಂಡು ಹೋಗಬೇಕಿದ್ದು ಈ ರಸ್ತೆ ಬಂದ್ ಮಾಡಬೇಡಿ ಎಂದು ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಆರಂಭ ಮಾಡಬೇಕೆಂಬ ಉದ್ದೇಶದಿಂದ ಇಂದಿನಿಂದಲೇ ಓತಿಘಟ್ಟದಲ್ಲಿರುವ ಕಾರಗೃಹದ ರಸ್ತೆಯನ್ನ ಬೆಳಗ್ಗಿನ ಜಾವದಿಂದಲೇ ಬಂದ್ ಮಾಡಲಾಗಿತ್ತು. ಈ ರಸ್ತೆ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಪಕ್ಕದಲ್ಲಿಯೇ ಹಾದುಹೋಗಲಿದೆ.

ಈ ರಸ್ತೆಯನ್ನ ಬಂದ್ ಮಾಡುವುದರಿಂದ ಸಿದ್ದನಗುಡಿ ಮತ್ತು ಸಿರಿಯೂರು ಗ್ರಾಮಕ್ಕೆ 6 ಕಿಮಿ ದೂರವಾಗಲಿದೆ. ರಸ್ತೆಯಲ್ಲಿ ಕಾಡುಗಳು ಎದುರಾಗಲಿದೆ. ಈ ರಸ್ತೆಗಳಲ್ಲಿ ರಾತ್ರಿ ಹೊತ್ತು‌ಓಡಾಡಲು ಅನುಕೂಲಕರವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ. ಅಲ್ಲದೆ ವಿಮಾನ‌ನಿಲ್ದಾಣಕ್ಕೆ ನೀಡಲಾದ ಭೂಮಿಗೆ ಸೂಕ್ತ ಪರಿಹಾರವೂ ದೊರೆತಿಲ್ಲ ಎಂಬುದು ಸಹ ಅವರ ದೂರಾಗಿದೆ.

ಇದನ್ನೂ ಓದಿ-https://suddilive.in/archives/3428

Related Articles

Leave a Reply

Your email address will not be published. Required fields are marked *

Back to top button