ಸ್ಥಳೀಯ ಸುದ್ದಿಗಳು

ಮದುವೆಯಾಗು ಇಲ್ಲ ಆಸಿಡ್ ಎರಚುವುದಾಗಿ ಬೆದರಿಕೆ

ಸುದ್ದಿಲೈವ್/ಶಿವಮೊಗ್ಗ

ಪ್ರೀತಿ ವಿಚಾರದಲ್ಲಿ ಎರಡು ಪ್ರತ್ಯೇಕ ಘಟನೆಗಳು ಸಂಭವಿಸಿದ್ದು ಎರಡೂ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಂಧಿ ಬಜಾರ್ ನಲ್ಲಿ ಯುವತಿಗೆ ಮದುವೆಯಾಗುವಂತೆ ಒತ್ತಾಯಿಸಿ ಆಸಿಡ್ ಎರಚುವುದಾಗಿ ಬೆದರಿಸಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಿಸಿಎ ವಿದ್ಯಾರ್ಥಿನಿಗೆ ಬೆಂಗಳೂರಿನ ಪ್ರೇಮ್ ಎಂಬುವನು ಪರಿಚಯವಾಗಿರುತ್ತಾನೆ. ಪರಿಚಯವಾದ ಯುವಕ ಮದುವೆಯಾಗುವಂತೆ ದುಂಬಾಲು ಬಿದ್ದಿರುತ್ತಾನೆ. ಯುವತಿಯ ಸಹೋದರ ಈ ಬಗ್ಗೆ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ.

ಇತ್ತೀಚೆಗೆ ಅಣ್ಣ‌ತಂಗಿ ಆರ್ ಎಸ್ ಪಾರ್ಕ್ ಕಡೆ ಹೋಗುವಾಗ ಯುವಕ ಹಿಂಬಾಲಿಸಲು ಶುರು ಹಚ್ಚಿಕೊಂಡಿದ್ದಾನೆ. ಯುವತಿಯ ಸಹೋದರ ಯಾಕೆ ಹಿಂಬಾಲಿಸುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ನಿನ್ನ ತಂಗಿ ಮದುವೆಯಾಗಲಿ ಇಲ್ಲ ಆಸಿಡ್ ಎರಚುವುದಾಗಿ ಬೆದರಿಸಿದ್ದಾನೆ.

ಹಬ್ಬದ ದಿನವಾದುದರಿಂದ ಗಲಾಟೆ ಬೇಡ ಎಂದು ಹೇಳಿ ಮನೆಗೆ ವಾಪಾಸಾಗಿರುತ್ತಾರೆ. ಯುವತಿಯ ಮನೆಗೆ ನುಗ್ಗಿದ ಪ್ರೆಮ್ ಯುವತಿಯ ಕೈ ಹಿಡಿದು ಎಳೆಯಲು ಯತ್ನಿಸಿದ್ದಾನೆ. ಯುವತಿಯ ತಂದೆ ತಾಯಿ ಬಿಡಿಸಲು ಹೋದಾಗ ಯುವಕನ ತಾಯಿ ಮತ್ತು ಚಿಕ್ಕಮ್ಮ ಬಂದು ನಮ್ಮ ಮಗನನನ್ನೇ ಹೊರ ತಳ್ಳುತ್ತೀರ ಎಂದು ಬೈದಿದ್ದಾರೆ.

ಇದರಿಂದ ಯುವಕ ಪ್ರೇಮ್ ಮತ್ತು ತಾಯಿ ಮತ್ತು ಚಿಕ್ಕಮ್ಮನ ವಿರುದ್ಧ ಸಹೋದರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಚ್ಚು ತೋರಿಸಿ ಬೆದರಿಕೆ

ಶಿವಮೊಗ್ಗದ ದುರ್ಗಿಗುಡಿಯಲ್ಲಿ ಹಬ್ಬಕ್ಕಾಗಿ ಕುರಿ ಕೊಳ್ಳಲು ಹೋದ ವ್ಯಕ್ತಿಯ ಮೇಲೆ ಪ್ರೀತಿಸುತ್ತಿದ್ದ ಯುವತಿಗೆ ಯುವಕನ ಬಗ್ಗೆ ತಪ್ಪು ಹೇಳಿದ್ದೀರಿ ಎಂದು ಆರೋಪಿಸಿ ಮಚ್ಚು ತೋರಿಸಿ ಬೆದರಿಸುವ ಪ್ರಕರಣ ನಡೆದಿದೆ.

ವಿನೋಬ ನಗರದ ನಿವಾಸಿಯೊಬ್ಬರು ಸೂರಜ್ ಪ್ರೀತಿಸುತ್ತಿದ್ದ ಯುವತಿಗೆ ಆತನ ಬಗ್ಗೆ ತಪ್ಪು ಹೇಳಿದ್ದೀರ ಎಂದು ಹೇಳಿ ಮಚ್ಚು ತೋರಿಸಿದ್ದಾನೆ.‌ ಅವರು ದುರ್ಗಿಗುಡಿ 1 ನೇ ತಿರುವಿನಲ್ಲಿ ಕುರಿಕೋಳಿ ಕೊಳ್ಳಲು ಹೋದಾಗ ಘಟನೆ ನಡೆದಿದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸೂರಜ್, ಅಭಿ, ಅನಿಲನ ವಿರುದ್ಧ ದೂರುದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/10935

Related Articles

Leave a Reply

Your email address will not be published. Required fields are marked *

Back to top button