ಶೈಕ್ಷಣಿಕ ಸುದ್ದಿಗಳು

ಉಪನ್ಯಾಸಕ ನಾಗರ್ಷ ಕೆ. ಎಂ ಗೆ ಡಾಕ್ಟರೇಟ್ ಪದವಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಾಗರ್ಷ ಕೆ.ಎಂ. ಅವರಿಗೆ ಕುವೆಂಪು ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ರಸಾಯನಶಾಸ್ತ್ರ ವಿಭಾಗದಲ್ಲಿ ವಿಶೇಷ ಸಂಶೋಧನೆ ನಡೆಸಿ “ಸೈಸ್ಥೆಸಿಸ್, ಕ್ಯಾರಕ್ಟರೈಸೇಷನ್ ಆಫ್ ನ್ಯಾಫ್ತೋಫ್ಯೂರಾನ್ ಡಿರೈವೇಟಿವ್ಸ್ ಅಂಡ್ ದೇರ್ ಫಾರ್ಮಕೋಲಾಜಿಕಲ್ ಆಕ್ಟಿವಿಟೀಸ್” ಎಂಬ ವಿಷಯದ ಮೇಲೆ ಮಂಡಿಸಿದ್ದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರಿಗೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಡಾ. ಲತಾ ಕೆ. ಪಿ. ಮಾರ್ಗದರ್ಶನ ಮಾಡಿದ್ದರು.

ಮೂಲತಃ ಶಿವಮೊಗ್ಗ ತಾಲೂಕಿನ ಹಾರನಹಳ್ಳಿಯವರಾದ ಇವರು ಶಿವಮೊಗ್ಗ ಶರಾವತಿನಗರದ ನಿವಾಸಿ ಕಸೆಟ್ಟಿ ಮಂಜುನಾಥ ಮತ್ತು ಸುಮಂಗಳಾ ದಂಪತಿಗಳ ಪುತ್ರರಾಗಿದ್ದಾರೆ.

ಇದನ್ನೂ ಓದಿ-https://suddilive.in/archives/3004

Related Articles

Leave a Reply

Your email address will not be published. Required fields are marked *

Back to top button