ಸ್ಥಳೀಯ ಸುದ್ದಿಗಳು

ಖಾರದ ಪುಡಿ ಎರೆಚಿ ದರೋಡೆಗೆ ಸ್ಕೆಚ್ ಹಾಕುತ್ತಿದ್ದ ಗ್ಯಾಂಗ್-ಸರಿಯಾದ ವೇಳೆಗೆ ಸರಿಯಾದ ದಾಳಿ ನಡೆಸಿದ ದೊಡ್ಡಪೇಟೆ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಭರ್ಜರಿ ದರೋಡೆಗೆ ಸ್ಕೆಚ್ ಹಾಕಿ ನಿಂತಿದ್ದ ಯುವಕರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿ ಸ್ಟೀಲ್ ಡ್ರಾಗನ್, ಕಬ್ಬಿಣದ ರಾಡು ಹಾಗೂ ಲಾಂಗನ್ನ ವಶಪಡಿಸಿಕೊಂಡಿದ್ದಾರೆ. ಇದರಿಂದ ನಡೆಯ ಬೇಕಿದ್ದ ದೊಡ್ಡ ಕ್ರೈಂವೊಂದು ಸುಖಾಂತ್ಯ ಕಂಡಿದೆ.

ನಗರದ ಎನ್ ರಸ್ತೆಯ ಫಲಕ್ ಶಾದಿ ಮಹಲ್ ನ ಪಕ್ಷದಲ್ಲಿ 4-5 ಜನ ಯುವಕರ ಗುಂಪೊಂದು ಭಾರಿ ಅನಾಹುತ ಸೃಷ್ಠಿ ಸಲು ಮುಂದಾಗಿತ್ತು‌.N.T.ರಸ್ತೆಯ, ಪಾಲಕ್ ಶಾದಿಮಹಲ್ ಪಕ್ಕದ ಖಾಲಿ ಜಾಗದಲ್ಲಿ,  ಹೊಂದಿಕೊಂಡಿರುವ ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನಗಳನ್ನು ತಡೆದು ಅವರ ಬಳಿ ಇರುವ ನಗದುಹಣ ಬಂಗಾರದ ಒಡವೆಗಳನ್ನು ಕಿತ್ತುಕೊಳ್ಳಲು 4 ರಿಂದ 5 ಜನರ ಗುಂಪು ಹೊಂಚು ಹಾಕುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು

ಸಿಬ್ಬಂದಿಯವರೊಂದಿಗೆ ಅಖಾಡಕ್ಕಿಳಿದಿದ್ದ ಪಿಎಸ್ ಐ ವಸಂತ್  ಮಾಹಿತಿ ಬಂದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ಗುಪ್ತವಾಗಿ ಪರಿಶೀಲಿಸಿದಾ


ಗ  4-5 ಜನರು ಅಪಾಯಕರವಾದ ಆಯುಧಗಳನ್ನು ಹಿಡಿದು ಸುಲಿಗೆ ಮತ್ತು ದರೋಡೆಯಂತಹ ಕೃತ್ಯವೆಸಗುವ ಉದ್ದೇಶಹೊಂದಿ ಹೊಂಚು ಹಾಕುತ್ತಿರುವುದು ತಿಳಿದು ಬಂದಿದೆ.

ಸ್ಥಳವನ್ನ ಸುತ್ತುವರೆದ ಪಿಎಸ್ಐ  ಆಯುಧಗಳ ಸಮೇತ 4 ಜನರನ್ನು ಹಿಡಿದುಕೊಂಡಿದ್ದಾರೆ, ಇದರಲ್ಲಿ ಓರ್ವ ತಪ್ಪಿಸಿಕೊಂಡಿದ್ದಾನೆ.   ಆರೋಪಿತರನ್ನು ಕಲಕುಂಶವಾಗಿ ವಿಚಾರ ಮಾಡಿದಾಗ ತಮಗೆ ಹಣದ ಅವಶ್ಯಕತೆ ಇದೆ. ಹಣ ಮತ್ತು ಬಂಗಾರದ ಒಡವೆಗಳನ್ನು ಹೊಂದಿರುವ ಜನರನ್ನು ತಡೆದು ಅವರ ಮುಖಕ್ಕೆ, ಕಾರದ ಪುಡಿ ಎರಚಿ ಆಯುದಗಳನ್ನು ತೋರಿಸಿ ಹೆದರಿಸಿ ಹಣ ಮತ್ತು ಬಂಗಾರದ ಒಡವೆಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ತಿಳಿಸಿದ್ದಾರೆ. ಇವರನ್ನ ಪೊಲೀಸರು ಬಂಧಿಸಿದ್ದಾರೆ.

ಇವರ ವಶದಲಿದ್ದ 1) ಸುಮಾರು 1½ಅಡಿ ಉದ್ದದ ಕಬ್ಬಿಣದ ರಾಡು, 2) ಸುಮಾರು 1½ ಅಡಿ ಉದ್ದದ ಮರದ ಹಿಡಿ ಇರುವ ಮಚ್ಚು ಮತ್ತು ಸುಮಾರು 50 ಗ್ರಾಂ ತೂಕದ ಖಾರದ ಪುಡಿ ಇರುವ ಒಂದು ಪ್ಲಾಸ್ಮಿಕ್ ಕಪ್ಪು ಕವರ್, 3) ಸುಮಾರು 1 ಅಡಿ ಉದ್ದದ ಫೈಬರ್ ಹಿಡಿಕೆ ಇರುವ ಸ್ಟೀಲ್ ಡ್ರಾಗನ್, 4) ಸುಮಾರು 1 ಅಡಿ ಉದ್ದದ ಕಪ್ಪು ಧಾರದಿಂದ ಸುತ್ತಿರುವ ಸ್ಟೀಲ್ ಡ್ರಾಗನ್ ಇವುಗಳನ್ನು ವಶಕ್ಕೆ ಪಡೆಯಲಾಗಿದೆ.

ಹೊಟೆಲ್ ಕಾರ್ಮಿಕನಾಗಿರುವ ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದ ದೇವರಾಜ್ (31), ಕೋಟೆಗಂಗೂರಿನ ಸಾಗರ್ ಯಾನೆ ಶಬರೀಶ್( 22), ಭದ್ರಾವತಿ ಎಪಿಎಂಸಿಯಲ್ಲಿರುವ ಅಡಿಕೆ ಮಂಡಿಯಲ್ಲಿ ಕೆಲಸಮಾಡಿಕೊಂಡಿದ್ದ ನಾಗರಾಜ್ ಯಾನೆ ಕುಮಾರ (38), ರಾಗಿಗುಡ್ಡದ ಶೇಯಸ್ (22) ತಪ್ಪಿಸಿಕೊಂಡವನನ್ನ ಕೋಟೆಗ.ಗೂರಿನ ಸಂತೋಷ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ-https://suddilive.in/archives/2985

Related Articles

Leave a Reply

Your email address will not be published. Required fields are marked *

Back to top button