ಕ್ರೈಂ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಚಾಕು ಇರಿತ-ಮೂವರು ಆಸ್ಪತ್ರೆಗೆ ದಾಖಲು

ಸುದ್ದಿಲೈವ್/ಶಿವಮೊಗ್ಗ

ವೈಯಕ್ತಿಕ ಕಾರಣಕ್ಕೆ ಯುವಕರ ನಡುವೆ ಗಲಾಟೆ- ಮೂವರಿಗೆ ಚಾಕುವಿನಿಂದ ಹಲ್ಲೆ ನಡೆದಿದೆ. ಶಿವಮೊಗ್ಗದ ಜೆ ಪಿ ನಗರದ ಬಳಿ ನಿನ್ನೆ ರಾತ್ರಿ ನಡೆದ ಘಟನೆ ನಡೆದಿದೆ.

ಶಿವಮೊಗ್ಗ ಟಿಪ್ಪುನಗರದ ಸಮೀರ್ (23), ಫರಾಜ್ (24) ಮೇಲೆ ಹಲ್ಲೆ ನಡೆದಿದ್ದು ಗಾಯಗಳಾಗಿವೆ.ಜೆಪಿ ನಗರದ ಮೊಹಮದ್ ಖಾಲಿದ್ @ ಸೋನು(19) ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ.

ಗಾಯಾಳುಗಳನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಳೆದ 15 ದಿನದ ಹಿಂದೆ ಕೂಡ ಗಲಾಟೆ ಮಾಡಿಕೊಂಡಿದ್ದ ಯುವಕರು.ಸಮೀರ್, ಫರಾಜ್ ಮತ್ತು ಸಲ್ಲು, ಸೆಬು, ಸೋನು, ಕತ್ರು ಟೀಂ ನಡುವೆ ಗಲಾಟೆ ನಡೆದಿತ್ತು.ನಿನ್ನೆ ಜೆಪಿನಗರದ ಜಂಡೆಕಟ್ಟೆ ಬಳಿ ಗ್ಯಾರವಿ (ಹಿರಿಯರ ಪೂಜೆ) ಸಂಭ್ರಮದಲ್ಲಿ  ಯುವಕರು ಭಾಗಿಯಾಗಿದ್ದರು.

ಈ ವೇಳೆ ಪರಸ್ಪರ ಗುರಾಯಿಸಿ ಕೊಂಡು, ಮಾರಕಾಸ್ತ್ರದಿಂದ ಯುವಕರು ಹಲ್ಲೆ ಮಾಡಿಕೊಂಡಿದ್ದಾರೆ.  ವೈಯಕ್ತಿಕ ಹಾಗೂ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ  ಗಲಾಟೆ ನಡೆದಿದೆ. ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 323, 324, 307, 504, 341 r/w 149 IPC ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/2786

Related Articles

Leave a Reply

Your email address will not be published. Required fields are marked *

Back to top button