ನನ್ನನ್ನ ಅವರಪ್ಪನೂ ವಾಪಾಸ್ ಬಿಜೆಪಿಗೆ ಸೇರಿಸಿಕೊಳ್ಳಬೇಕು-ಈಶ್ವರಪ್ಪ
ಸುದ್ದಿಲೈವ್/ಶಿವಮೊಗ್ಗ
ಉಚ್ಚಾಟನೆಯ ನಂತರ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಈಶ್ವರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಎಸ್ ವೈ ಕುಟುಂಬಸ್ಥರು ನಿರಂತರ ನನ್ನ ಸ್ಪರ್ಧೆ ಕುರಿತು ಗೊಂದಲ ಸೃಷ್ಟಿ ಮಾಡಿದ್ರು. ಈಗ ಎಲ್ಲ ಗೊಂದಲಕ್ಕೆ ನಿವಾರಣೆ ಆಗಿದೆ ಎಂದರು.
ನಾನು ಚುನಾವಣೆ ಸ್ಪರ್ಧೆ ಮಾಡುತ್ತಿರುವೆ. ನಾನು ಕಟ್ಟಿದ ಪಕ್ಷದಿಂದ ನನ್ನನ್ನೇ ಉಚ್ಚಾಟನೆ ಮಾಡಿರುವ ಕುರಿತು ಅನೇಕರು ಬೇಸರ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ ನಾನು ಸೇರುವುದಿಲ್ಲ. ಇದು ಕೇವಲ ತಾತ್ಕಾಲಿಕ ಮಾತ್ರ, ಮತ್ತೆ ವಾಪಸ್ ನಾನು ಬಿಜೆಪಿ ಗೆ ಸೇರ್ಪಡೆ ಆಗುತ್ತೇನೆ. ಪಕ್ಷದ ವಾಪಸಾತಿಯ ಕುರಿತು ಬಿಎಸ್ ವೈ ವಿರುದ್ಧ ಗರಂ ಆದ ಈಶ್ವರಪ್ಪ ನಾನು ಚುನಾವಣೆಯಲ್ಲಿ ಗೆದ್ದು ವಾಪಾಸ್ ಬಿಜೆಪಿಗೆ ಹೋಗುವೆ. ಅವರಅಪ್ಪನೂ ಸೇರಿಸಿಕೊಳ್ಳಬೇಕು ಎಂದು ಗಟ್ಟಿಧ್ವನಿಯಲ್ಲಿ ತಿಳಿಸಿದರು.
ಉಚ್ಚಾಟನೆಯ ಕುತಂತ್ರ ಮಾಡಿ ನನ್ನನ್ನು ಹೊರಗೆ ಹಾಕಿದ್ದಾರೆ.ಅಪ್ಪ ಮಕ್ಕಳು ನನ್ನನ್ನು ಹೊರಗೆ ಹಾಕಿದ್ದಾರೆ. ವಿಜಯೇಂದ್ರ ನನ್ನ ಉಚ್ಚಾಟನೆ ಮಾಡಿರುವುದು ರಾಜ್ಯದ ಜನರಿಗೆ ನೋವು ಆಗಿದೆ. ರೈತ ಚಿಹ್ನೆ ಸಿಕ್ಕಿರುವುದು ಸಂತಸ ಸಿಕ್ಕಿದೆ ಎಂದರು.
ನಾಳೆಯಿಂದ ಚಿಹ್ನೆ ಮನೆ ಮನೆ ತಲುಪಲಿದೆ. ಮಾಜಿ ಬಿಎಸ್ ವೈ ವಿರುದ್ಧ ವಾಗ್ಧಾಳಿ ನಡೆಸಿದ ಈಶ್ವರಪ್ಪ. ಬಿಎಸ್ ವೈ ಪಕ್ಷ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದ್ದರು. ನಂತರ ವಾಪಸ್ ಇವರನ್ನು ಬಿಜೆಪಿಗೆ ಸೇರ್ಪಡೆ ಮಾಡಲಾಯಿತು.
ಕೆಜೆಪಿಯಲ್ಲಿದ್ದ ಬಿಎಸ್ ವೈ ಟಿಪ್ಪು ಜಯಂತಿ ನಡೆಸಿ ಬಿಎಸ್ ವೈ ಟಿಪ್ಪು ಟೋಪಿ ಹಾಕಿದ್ದರು. ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಮಾಡಿದರೂ ಕೆಲವೇ ತಿಂಗಳಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಬಿಜೆಪಿ ಸೇರ್ಪಡೆ ಮಾಡಿದ್ದಾರೆ. ನನ್ನನ್ನು ಬಿಜೆಪಿ ಪಕ್ಷಕ್ಕೆ ವಾಪಸ್ ಸೇರ್ಪಡೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ-https://suddilive.in/archives/13466