ಹುಬ್ಬಳ್ಳಿ ಪ್ರಕರಣ ಸಿಒಡಿಗೆ ಹಸ್ತಾಂತರ-ಸಿಎಂ ಸಿದ್ದರಾಮಯ್ಯ
ಸುದ್ದಿಲೈವ್/ಶಿವಮೊಗ್ಗ
ಪಕ್ಕಿರೇಶ್ವರ ಮಠ ಜ್ಯಾತ್ಯಾತೀತ ಮಠವಾಗಿದೆ. ದಿಂಗಾಲೇಶ್ವರ ಸ್ವಾಮೀಜಿಗಳು ಧಾರವಾಡ ಇವರಿಗೆ ನಾಮಪತ್ರ ವಾಪಾಸು ತೆಗೆದುಕೊಂಡು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ ಎಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಾತನಾಡಿ, ಅವರ ಮಠ ಜಾತ್ಯಾತೀತ ಮಠ ಆಗಿದೆ. ವಾಪಾಸು ತಗೆದುಕೊಳ್ಳುವ ವಿಶ್ವಾಸ ಇದೆ ಎಂದ ಅವರು ಹುಬ್ಬಳ್ಳಿ ಪ್ರಕರಣವನ್ನು ಸಿಒಡಿಗೆ ವಹಿಸಲಾಗಿದೆ ಎಂದರು.
ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾಮೀಜಿಯ ಬಳಿ ಹೋಗಿದ್ದಾರೆ. ನಾವು 20 ಸೀಟು ಗೆಲ್ಲುತ್ತೇವೆ. ಶಿವಮೊಗ್ಗ ಕ್ಷೇತ್ರವನ್ನು ಸಹ ಗೆಲ್ಲುತ್ತೇವೆ. ನಮ್ಮ ಶಕ್ತಿ ಮೇಲೆ ನಾವು ಗೆಲ್ಲುತ್ತೇವೆ ಎಂದರು.
ನಮ್ಮ ಕಾಲದಲ್ಲಿ ಕ್ರೈಮ್ ಕಡಿಮೆ ಆಗಿದೆ. ಬಿಜೆಪಿ ಆಡಳಿತದಲ್ಲಿ ಹೆಚ್ಚು ಕ್ರೈಮ್ ಆಗಿತ್ತು. ನಮ್ಮ ಕಾಲದಲ್ಲಿ 1390 ಅಪರಾಧಿ ಪ್ರಕರಣ ಆಗಿದೆ. ನಮ್ಮ ಕಾಲದಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ. ಹುಬ್ಬಳ್ಳಿ ನೇಹಾ ಪ್ರಕರಣದಲ್ಲಿ ಆರೋಪಿಗೆ ತ್ವರಿತವಾಗಿ ಶಿಕ್ಷೆ ಕೊಡಬೇಕು ಅಂತ ವಿಶೇಷ ಕೋರ್ಟ್ ಗೆ ವಹಿಸಿದ್ದೇವೆ ಎಂದರು.
ಇದನ್ನೂ ಓದಿ-https://suddilive.in/archives/13385