ನಗರ‌ ಸುದ್ದಿಗಳು

ಹಣೆಯಲ್ಲಿದ್ದ ಕುಂಕುಮ ಅಳಸಿಕೊಂಡ ವಿಜೇಂದ್ರ ವಿಡಿಯೋ ಈಗ ವೈರಲ್

ಸುದ್ದಿಲೈವ್/ಶಿವಮೊಗ್ಗ

ಇತ್ತೀಚೆಗೆ ಜಟಪಟ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಹಣೆಗೆಹಚ್ಚಿದ ಕುಂಕುಮವನ್ನ ಅಳಸಿಕೊಂಡು ಮತ ಯಾಚಿಸಿದ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು ವೇದಿಕೆಯ ಮೇಲೆ ಕುಂಕುಮ ಅಳಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.

ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಮ್ಮ ಭಾಷಣ ಮುಗಿಸಿ ವೇದಿಕೆಯ ಮೇಲೆಯೇ ಹಣೆಗೆ ಹಚ್ಚಿದ ಕುಂಕುಮವನ್ನ ಅಳಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಇದೇನಾ ಹಿಂದುತ್ವ ಎಂದು ಪ್ರಶ್ನಿಸಲಾಗಿದೆ. ಹಿಂದುತ್ವದ ನಾಟಕವಾಡಿಕೊಙಡು ಓಡಾಡುವವರು ಬಿಜೆಪಿಗರು ಎಂದು ವೈರಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಫೇಸ್ ಬುಕ್ ಗಳಲ್ಲಿ ಬಿಜೆಪಿ ಎದುರಾಳಿಗಳು ವೈರಲ್ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಮಹಿಳೆಯರು ಇಟ್ಟ ಕುಂಕುಮವನ್ನ ಅಳಸಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೆ ಹಿಂದೂ ವಿರೋಧಿ ಎಂದು ಬಿಂಬಿಸಲಾಗಿತ್ತು. ಈಗ ಈ ವಿಡಿಯೋ ರಾಜಕೀಯವ ವಲಯದಲ್ಲಿ ಬಿರುಗಾಳಿ ಎಬ್ಬಿಸುತ್ತಾ ಅಥವಾ ಠುಸ್ ಪಟಾಕಿ ಹೊಡೆಯುತ್ತಾ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/13344

Related Articles

Leave a Reply

Your email address will not be published. Required fields are marked *

Back to top button