ಮಾರಿಹಬ್ಬದ ಪ್ರಯುಕ್ತ ಬಜಾರ್ ನಲ್ಲಿ ಚಪ್ಪರ ಪೂಜೆ
ಸುದ್ದಿಲೈವ್/ಶಿವಮೊಗ್ಗ
ಮಾ.12 ರಿಂದ ಆಭವಾಗುತ್ತಿರುವ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಅಂಗವಾಗಿ ಗಾಂಧಿ ಬಜಾರ್ನಲ್ಲಿ ಚಪ್ಪರ ಪೂಜೆ ನೆರವೇರಿಸಲಾಯಿತು. ದೇವಿಯ ತಾಯಿಯ ತವರು ಮನೆಯಾದ ಗಾಂಧಿ ಬಜಾರ್ನಲ್ಲಿ ದೇವಸ್ಥಾನ ಸಮಿತಿ ಹಾಗೂ ಭಕ್ತರ ಸಮ್ಮುಖದಲ್ಲಿ ಚಪ್ಪರ ಪೂಜೆ ನೆರವೇರಿಸಲಾಯಿತು.
ಈ ಬಾರಿ ಮಾರಿಕಾಂಬೆ ದೇವಿ ಜಾತ್ರೆಯು ಮಾರ್ಚ್ 12 ರಿಂದ 16ರವರೆಗೆ ನಡೆಯಲಿದೆ. ಮಾ.12ರಂದು ತವರು ಮನೆ ಗಾಂಧಿ ಬಜಾರ್ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮರು ದಿನ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿರುವ ಗದ್ದುಗೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಾರ್ಚ್ 16ರಂದು ರಾಜಬೀದಿ ಉತ್ಸವದ ಮೂಲಕ ದೇವಿಯನ್ನು ಕಾಡಿಗೆ ಬಿಟ್ಟು ಬರಲಾಗುತ್ತದೆ.
ಚಪ್ಪರ ಶಾಸ್ತ್ರದ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಪೂಜಾ ಕನ್ವಿನರ್ ಸತ್ಯನಾರಾಯಣ, ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿ ಸುನೀಲ್, ಡಿ.ಎಸ್.ಚಂದ್ರಶೇಖರ್, ಪ್ರಭಾಕರ ಗೌಡ, ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ-https://suddilive.in/archives/10030