ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಆನೆ ಬಿಡಾರಕ್ಕೆ ಭೇಟಿ-ಸವಾರಿಗೆ ಅವಕಾಶ
ಸುದ್ದಿಲೈವ್/ಶಿವಮೊಗ್ಗ
ಕಾನೂನು ಪರಿಪಾಲನೆಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆನೆಯ ಮೇಲೆ ಸವಾರಿಯನ್ನ ರದ್ದು ಪಡಿಸಿದರೂ ಇಂದು ಸಿನಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರು ಸವಾರಿ ಮಾಡಲು ಆನೆ ಬಿಡಾರದಲ್ಲಿ ಅವಕಾಶ ನೀಡಲಾಗಿದೆ.
ಇಂದು ಸಚಿವರು ಮಧು ಬಂಗಾರಪ್ಪ, ಸಹೋದರಿ ಹಾಗೂ ಕಾಂಗ್ರೆಸ್ ನ ಅಭ್ಯರ್ಥಿ ಗೀತ, ನಟ ಶಿವರಾಜ್ ಕುಮಾರ್ ಇಂದು ಸಕ್ರೇಬೈಲಿನ ಆನೆ ಬಿಡಾರಕ್ಕೆ ಭೇಟಿ ನೀಡಿದ್ದಾರೆ. ಭೇಟಿಯ ವೇಳೆ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಮತ್ತು ನಟ ಶಿವರಾಜ್ ಕುಮಾರ್ ಆನೆ ಸವಾರಿ ಮಾಡಿದ್ದಾರೆ.
ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೋರುವ ಸಾಗರನ ಮೇಲೆ ಸವಾರಿ ಮಾಡಿದ್ದಾರೆ. 200 ರೂ. ಗೆ ಆನೆ ಸವಾರಿ ಮಾಡಲಾಗಿದೆ. ಆದರೆ ಇದೇ 15 ದಿನಗಳ ಹಿಂದೆ ಭೇಟಿ ನೀಡಿದ್ದ ಶಿವಮೊಗ್ಗದ ಕುಟುಂಬವೊಂದಕ್ಕೆ ಆನೆ ಸವಾರಿ ನಿರಾಕರಿಸಲಾಗಿತ್ತು.
15 ದಿನಗಳ ಒಳಗೆ ಈ ಕಾನೂನು ಬದಲಾಯಿಸಿ ಸಚಿವರ ಕುಡುಂಬಕ್ಕೆ ಅವಕಾಶ ಮಾಡಿಕೊಡಲಾಗಿರುವುದು ಅಚ್ಚರಿ ಮೂಡಿಸಿದೆ. ಆನೆಗಳಿಗೆ ಬಾತಿಂಗ್ ಮತ್ತು ಬೋಟಿಂಗ್ ಗೆ ಅವಕಾಶ ಕಲ್ಪಿಸಲಾಗಿತ್ತು. ಸುಪ್ರೀಂ ಕೋರ್ಟನ ನಿರ್ದೇಶನದ ಮೇರೆಗೆ ಆನೆಗಳ ಸವಾರಿ ನಿಷೇಧಿಸಲಾಗಿದೆ. ಆದರೆ ಕೆಲವೊಂದು ವರ್ಗಕ್ಕೆ ಅವಕಾಶ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಲಯದ ಆದೇಶದ ಉಲ್ಲಂಘನೆ ಮತ್ತು ಹಗರಣಗಳು ದೂರದಲ್ಲಿರುವ ಜನಸಾಮಾನ್ಯನಿಗೆ ನೋವು ಉಂಟು ಮಾಡುತ್ತವೆ.
ಇಲ್ಲಿನ ಅಧಿಕಾರಿಯೊಬ್ಬ ಟಿಕೇಟ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ವರ್ಗಾವಣೆಯಾಗಿರುವ ಉದಾಹರಣಗಳು ಇವೆ. ಒಟ್ಟಿನಲ್ಲಿ ಕಾನೂನುಗಳು ಮಾತ್ರ ಜನ ಸಾಮಾನ್ಯನಿಗೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಆದರೆ ಕಾನೂನು ಮುರಿದು ಬದುಕುತ್ತಿರುವರಿಗೆ ಕಾನೂನು ಉಲ್ಲಂಘನೆ ಸಲೀಸಾಗಿದೆ. ಆನೆಗಳ ಹೆಸರಿನಲ್ಲಿ ಅವ್ಯವಹಾರ ನಡೆದಿದೆ.
ಇದನ್ನೂ ಓದಿ-https://suddilive.in/archives/12798