ಕ್ರೈಂ ನ್ಯೂಸ್
ಸಿಡಿಲಿಗೆ 18 ಕುರಿಗಳು ಸಾವು
ಸುದ್ದಿಲೈವ್/ಶಿವಮೊಗ್ಗ
ಆಯನೂರಿನಲ್ಲಿ ಸಿಡಿಲು ಬಡಿದು 18 ಕ್ಕು ಹೆಚ್ಚು ಕುರಿಗಳು ಸಾವು ಕಂಡಿವೆ. ಕುರಿಗಳ ಸಾವಿಗೆ ಮಾಲೀಕ ಕಣ್ಣೀರು ಹಾಕಿದ್ದಾನೆ.
ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಗೆ ಕುರಿಗಳು ಸಾವಾಗಿವೆ. ಸುಮಾರು ಮೂರು ಲಕ್ಷ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಮಾವಿನ ಮರದ ಕೆಳಗಡೆ ನಿಲ್ಲಿಸಿದ್ದ ವೇಳೆ ಸಿಡಿಲು ಬಡಿದು ಕುರಿ ಸಾವು ಕಂಡಿವೆ. ಜಾಕೀರ್ ಹುಸೇನ್ ಎನ್ನುವ ವ್ಯಕ್ತಿಗೆ ಕುರಿಗಳು ಸೇರಿವೆ.ಕುರಿ ಸಾವನ್ನಪ್ಪಿದನ್ನು ನೋಡಿ ಮಾಲೀಕ ಕಣ್ಣೀರಿಟ್ಟಿದ್ದಾನೆ.
ಇದನ್ನೂ ಓದಿ-https://suddilive.in/archives/12668