ಸಿನಿಮಾ ಸುದ್ದಿಗಳು

ಯುಗಾದಿಯಲ್ಲಿ ಹೊಸ ಚಿಗುರು ಹುಟ್ಟುವಂತೆ ಚುನಾವಣೆಯಲ್ಲಿ ಹೊಸಬರು ಬರಲಿ ಎಂದ ಶಿವಣ್ಣ

ಸುದ್ದಿಲೈವ್/ಶಿವಮೊಗ್ಗ

ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿರುವ  ನಟ ಶಿವರಾಜ್ ಕುಮಾರ್ ಪತ್ನಿ ಗೀತ ಪರ ಕುಂಚೇನಹಳ್ಳಿಯಲ್ಲಿ ಭರ್ಜರಿ ಮತಯಾಚಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದ ಶಿವಣ್ಣ ಬಹಳ ಖುಷಿ ಆಗುತ್ತೆ ನಿಮ್ಮನ್ನ ನೋಡಿದ್ರೆ. ನಿಮ್ಮ ವೇಷಭೂಷಣ ನೋಡಿ ಖುಷಿ ಆಯ್ತು. ಒಳ್ಳೆಯ ಮನುಷ್ಯನಿಗೆ ಯಾವ ಜಾತಿ ನೋಡಿ ಪ್ರೀತಿಸೋಲ್ಲ ಎಂದರು.‌

ಗೀತಾ ಶಕ್ತಿಧಾಮ‌ ನೋಡಿ ಕೊಳ್ಳುತ್ತಿದ್ದಾರೆ ಈ ಭಾರಿ ಅವರಿಗೆ ಶಕ್ತಿ ಕೊಡಿ. ಒಂದು ಬಾರಿ ಅವಕಾಶ ಕೊಡಿ. ಸರ್ಕಾರ ಅನೇಕ ಗ್ಯಾರಂಟಿ ಕೊಟ್ಟಿದೆ. ನಾನೇ ನಿಮಗೆ ಗ್ಯಾರಂಟಿ ಒಮ್ಮೆ ಗೆಲ್ಲಿಸಿ ಎಂದ ಶಿವಣ್ಣ ಹೊಸ ಅಲೆ ಬರಬೇಕು. ಯುಗಾದಿಯ ವೇಳೆ ಎಲ್ಲೆಲ್ಲೂ ಹೊಸ ಚಿಗುರು ಹುಟ್ಟುವಂತೆ ಹೊಸಬರು ಬರಬೇಕು ಎಂದು ಹೇಳಿದರು.

ಎಲ್ಲರ ಜೀವನದಲ್ಲಿ ಸಿಹಿ ಜಾಸ್ತಿ ಇರಲಿ‌ ಅದರಲ್ಲಿ ಸ್ವಲ್ಪ ಸಿಹಿ ಗೀತನಿಗೆ ಕೊಡಿ ಎಂದು ಮತಯಾಚಿಸಿದರು.

ಮತ್ತೆ ಸಿನಿಮಾ ಡೈಲಾಗ್ ಹೊಡೆದ ಶಿವಣ್ಣ‌”ಓ ಬರ್ಕೋಳಯ್ಯ ಈ ತಾಂಡ ನಂದು ಎಂದಿದ್ದಾರೆ. ಹಾಡು ಡೈಲಾಂಗ್ ಹೇಳಿ ರಂಜಿಸಿದ ಶಿವಣ್ಣನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವೇಂದು ಚಿರ ಋಣಿ ಎಂದಿದ್ದಾರೆ.‌

ಇದನ್ನೂ ಓದಿ-https://suddilive.in/archives/12444

Related Articles

Leave a Reply

Your email address will not be published. Required fields are marked *

Back to top button