ಶಿವಮೊಗ್ಗದ ಶಾಹೀ ಗಾರ್ಮೆಂಟ್ಸ್ ವಿರುದ್ಧ ನನ್ನಹೋರಾಟ-ಗೋಪಾಲ ಕೃಷ್ಣ ಬೇಳೂರು
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಶಾಹೀ ಗಾರ್ಮೆಂಟ್ಸ್ ನ ಬೇನಾಮಿ ಜಮೀನನ್ನ ವಾಪಾಸ್ ಪಡೆಯದಿದ್ದರೆ ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮತ್ತು ರಾಜೀನಾಮೆ ನೀಡುವುದಾಗಿ ಗುಡುಗಿದ್ದಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಗರದಲ್ಲಿ ಶಾಹೀ ಗಾರ್ಮೆಂಟ್ಸ್ ಗೆ ಐದು ಎಕರೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಐದು ಎಕರೆ ಜಾಗದಲ್ಲಿ ಕಾರ್ಝಾನೆ ಇದೆ. ಆದರೆ240 ಎಕರೆ ನೀಡಿರುವುದೇಕೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಎಸ್ ವೈ ಅವರೇ 240 ಎಕರೆ ನೀಡಿದ್ದಾರೆ.
ಇದರಲ್ಲಿ ಬಿಎಸ್ ವೈ ಕುಟುಂಬದ ಬೇನಾಮಿ ಆಸ್ತಿ ಇದೆ ಹಾಗಾಗಿ ಸರ್ಕಾರ ತನಿಖೆ ಮಾಡಬೇಕು. ಇದಕ್ಕಾಗಿ ವಿಧಾನ ಸೌಧದ ಎದುರು ಪ್ರತಿಭಟಿಸುವೆ. ತನಿಖೆ ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಗುಡುಗಿದರು
26 ಎಂಪಿಗಳು ರಾಜ್ಯದ ಪರವಾಗಿ ಧ್ವನಿ ಎತ್ತಿಲ್ಲ. ರಾಜ್ಯದಲ್ಲಿ ಬರಬಂದಿದೆಮೋದಿ ಜೊತೆ ಮಾತನಾಡಿಲ್ಲ. ರಾಜ್ಯದ ಪರ ಧ್ವನಿ ಎತ್ತದ ಎಂಪಿಗಳು ನಮಗೆ ಬೇಕಾ?
ಬಸ್ ಸ್ಟ್ಯಾಂಡ್ ಅಭಿವೃದ್ಧಿ ಆಗಿದ್ದು ಬಿಟ್ಟರೆ ಬೇರೆ ಅಭಿವೃದ್ಧಿಯಾಗಿಲ್ಲ. ರಸ್ತೆಅಭಿವೃದ್ಧಿ ಮಢ್ತೀನಿ ಎಂದು 18 ವರ್ಷದಿಂದ ತುಮೂರು ಶಿವಮೊಗ್ಗ ಹೈವೆ ರಸ್ತೆ ನಿರ್ಮಿಸಿಲ್ಲ ಏಕೆ? ನೆಟ್ ವರ್ಕ್ ನಲ್ಲೂಸಹ ರಾಜ್ಯ ಸರ್ಕಾರದ ಹಣವಿದೆ. ಎಂಪಿಗಳು ಮಾತ್ರ ವಿಶ್ವಬಗುರು ಎಂದು ಪ್ರಚಾರ ನೀಡುತ್ತಿದ್ದಾರೆ ಎಂದು ದೂರಿದರು.
ಡಿಸಿಸಿ ಬ್ಯಾಂಕ್ ನಲ್ಲೂ ಹಣ ಲೂಟಿಯಾಗಿದೆ. ಸಂಸದರ ಭ್ರಷ್ಠಾಚಾರದ ಅನುಮಾನವೂ ಇದೆ.ಶಾಹೀ ಗಾರ್ಮೆಂಟ್ಸ್ 240 ಎಕರೆ ಭೂಮಿ ನೀಡಿರುವುದು ತನಿಖೆಯಾಗಬೇಕು. ಕೋಟಾ ಶ್ರೀನಿವಾಸ ಪೂಜಾರಿಯ ಬೇನಾಮಿ ಹಣ ಭಟ್ಟರ ಬಳಿ ಇದೆ ಎಂದು ಆರೋಪಿಸಿದ ಬೇಳೂರು ಭ್ರಷ್ಠಾಚಾರಿಗಳು ಬಿಜೆಪಿಗೆ ಸೇರಿದರೆ ಆರೋಪದಿಂದ ಮುಕ್ತರಾಗುತ್ತಾರೆ. ಹಾಗಾದರೆ ಬಿಜೆಪಿ ಭ್ರಷ್ಠಾಚಾರವನನ್ನ ತೊಳೆಯುವ ವಾಷಿಂಗ್ ಮಿಷಿನಾ ಎಂದು ಪ್ರಶ್ನಿಸಿದರು.
ಗೀತ ಶಿವರಾಜ್ ಕುಮಾರ್ ಅವರಿಗೆ ಸಾಗರ ಮತ್ತು 7 ವಿಧಾನ ಸಭ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ನಿಂದ ಗೆಲ್ತಾರೆ. ಬಿಜೆಪಿ ಸಂಸದರ ವಿರುದ್ಧ ಅಲೆ ಇದೆ. ಇಂದಿನ ಸಮೀಕ್ಷೆಯ ಪ್ರಕಾರ ಬಿಜೆಪಿಗಿಂತ ಹಿಂದೆ ಇದ್ದೇವೆ ಎಂಬುದು ಸತ್ಯ. ಆದರೆ ಎಂದರು. ಗೀತಾ ಶಿವರಾಜ್ ಕುಮಾರ್ ಅವರ ಮನೆ ಬೆಂಗಳೂರಿನಲ್ಲಿದೆ.
ದೇವರು ದಿಂಡರು ಎಂಬುದು ಬಿಎಸ್ ವೈ ಕುಟುಂಬಕ್ಕೆ ಸುಳ್ಳು. ನಿಮ್ಮಲ್ಲಿ ನಂಬಿಕೆ ಇದ್ದರೆ ಅದರ ಮೇಲೆ ಆಟವಾಡುತ್ತಾರೆ. ಈಶ್ವರಪ್ಪನವರು ಬಿಎಸ್ ವೈ ವಿರುದ್ಧ ಹೇಳಿಕೆ ನೂರಕ್ಕೆ ನೂರು ಸತ್ಯ. ಈಶ್ವರಪ್ಪನವರೆ ಹೊಡಿರಿ ನಿಮ್ಮ ರಥ ನಾವು ನಿಮ್ಮ ಜೊತೆ ಇದ್ದೀವೆ.
ಮನೆ ಮುಂದೆ ನಾಯಿ ಇದೆ ಎಂಬ ಆರೋಪ ಮಾಡಿರುವ ಮಾಜಿಸಚಿವ ಹರತಾಳ ಹಾಲಪ್ಪನವರ ಆರೋಪಕ್ಕೆ ಗುಡುಗಿದ ಬೇಳೂರು ಎಲ್ಲರ ಮನೆ ಬೆಂಗಳೂರಿನಲ್ಲಿದೆ. ಸಂಸದರದ್ದು, ಹಾಲಪ್ಪನವರ ಮನೆ ನನ್ನಮನೆಯೂ ಬೆಂಗಳೂರಿನಲ್ಲಿದೆ. ಗೀತರವರು ಗೆದ್ದು ಶಿವಮೊಗ್ಗದಲ್ಲೇ ನೆಲೆಸುತ್ತಾರೆ ಎಂದರು.
ಇದನ್ನೂ ಓದಿ-https://suddilive.in/archives/12123