ನಗರ‌ ಸುದ್ದಿಗಳು

ಜಿಲ್ಲಾ ಕಾಂಗ್ರೆಸ್ ಗೆ ಹೊಸ ಸಾರಥಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರನ್ನ ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ.

ಮಾಜಿ ಎಂಎಲ್ ಸಿ ಆರ್ ಪ್ರಸನ್ನ ಕುಮಾರ್ ಅವರನ್ನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ. ಹೆಚ್ ಎಸ್ ಸುಂದರೇಶ್ ಅವರು ಸೂಡಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಕ್ಷದ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಹೊಸಬರು ಆಯ್ಕೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಆರ್ ಪ್ರಸನ್ನ ಕುಮಾರ್

ಈಗ ಹೊಸ ಅಧ್ಯಕ್ಷರನ್ನ ಪಕ್ಷ ನೇಮಿಸಿದೆ.  ಈ ಹಿಂದೆ ಆರ್ ಪ್ರಸನ್ನ ಕುಮಾರ್ ಅಧ್ಯಕ್ಷರಾಗಿದ್ದರು. 10 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮತ್ತೆ ಅವರ ಅನುಭವದ ಹಿನ್ನಲೆಯಲ್ಲಿ ಅವರನ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎನ್ನಲಾಗಿದೆ

ಇದರಂತೆ ಬಳ್ಲಾರಿ ನಗರ, ಬೆಂಗಳೂರು ಪೂರ್ವ, ಹಾವೇರಿ ,ಕೊಪ್ಪಳ, ಉಡುಪಿ, ರಾಯಚೂರಿನಲ್ಲೂ ಜಿಲ್ಲಾ ಅಧ್ಯಕ್ಷರನ್ನ ನೇಮಿಸಿ ಪಕ್ಷ ಆದೇಶಿಸಿದೆ.

ಇದನ್ನೂ ಓದಿ-https://suddilive.in/archives/11937

Related Articles

Leave a Reply

Your email address will not be published. Required fields are marked *

Back to top button