ಸ್ಥಳೀಯ ಸುದ್ದಿಗಳು

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಹೆಸರು ಅಂತಿಮ

ಸುದ್ದಿಲೈವ್/ಶಿವಮೊಗ್ಗ

ನೈರತ್ಯ ಪದವಿದರ ಕ್ಷೇತ್ರದ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರನ್ನ ಪಕ್ಷ ಘೋಷಿಸಿದೆ. ಇದರಿಂದ ಯಾರಾಗುತ್ತಾರೆ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ.

ನೈರುತ್ಯ ಪದವಿದರ  ಕ್ಷೇತ್ರದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿದ್ದ ಆಯನೂರು ಮಂಜುನಾಥ್ ವಿಧಾನ ಸಭೆ ಚುನಾವಣೆ 2023 ರಲ್ಲಿ ರಾಜೀನಾಮೆ ನೀಡಿ  ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಒಂದು ವರ್ಷದ ಹಿಂದಿನಿಂದ ಈ ಕ್ಷೇತ್ರ ಖಾಲಿಯಾಗಿತ್ತು.

2024 ರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಮತ್ತು ಎಸ್ ಪಿ ದಿನೇಶ್ ಹೆಸರು ಕಾಂಗ್ರೆಸ್ ಹೈಕಮಾಂಡ್  ಕೈ ಸೇರಿತ್ತು. ಈ ನಡುವೆ ಇಬ್ವರಲ್ಲಿ ಯಾರು ಅಭ್ಯರ್ಥಿ ಆಗ್ತಾರೆ ಎಂಬ ವಿಷಯಕ್ಕೆ  ಆರೋಪ ಪ್ರತ್ಯಾರೋಪಗಳು ಆರಂಭವಾಗಿದ್ದವು.

ಈಗ ಈ ಕ್ಷೇತ್ರಕ್ಕೆ ಪಕ್ಷದ ವತಿಯಿಂದ ಹೆಸರು ಬಿಡುಗಡೆಯಾಗಿದ್ದು ಆಯನೂರು ಮಂಜುನಾಥ್ ರನ್ನ ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ-https://suddilive.in/archives/11246

Related Articles

Leave a Reply

Your email address will not be published. Required fields are marked *

Back to top button