ಈಶ್ವರಪ್ಪನವರ ಬೇಡಿಕೆಯಲ್ಲಿ ತಪ್ಪೇನಿಲ್ಲ-ಮೇಘರಾಜ್
ಸುದ್ದಿಲೈವ್/ಶಿವಮೊಗ್ಗ
ಈಶ್ವರಪ್ಪನವರು ಕೇಳುತ್ತಿರುವ ಬೇಡಿಕೆಯಲ್ಲಿ ತಪ್ಪಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ ಮೇಘರಾಜ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪನವರ ಬೇಡಿಕೆ ಸರಿಯಿದೆ ಪಕ್ಷ ಸೂಕ್ತ ಸಮಯದಲ್ಲಿ ಅವರನ್ನೂ ಮತ್ತು ಅವರ ಪುತ್ರರನ್ನ ಬಳಸಿಕೊಳ್ಳಲಿದೆ ಎಂದರು.
ನಿನ್ನೆ ಕಾಂಗ್ರೆಸ್ ಸಭೆಯಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಮತ್ತು ಸಚಿವ ಮಧು ಬಂಗಾರಪ್ಪ ಬಳಸಿದ ಹಡಬೆ ದಡ್ಡಿನಿಂದ ಬಿಜೆಪಿ ಚುನಾವಣೆ ನಡೆಸಲಿದೆ ಎಂಬ ಹೇಳಿಕೆ ವಿರುದ್ಧ ಮೇಘರಾಜ್ ಸುದ್ದಿಗೋಷ್ಠಿ ನಡೆಸಿ ಕೌಂಟರ್ ನೀಡಿದ್ದರು.
ಈ ವೇಳೆ ಈಶ್ವರಪ್ಪನವರು ಪಕ್ಷ ಶುದ್ಧೀಕರಣ ಆಗಬೇಕಿದೆ ಎಂಬ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಮೇಘರಾಜ್ ಪಕ್ಷ ಎಲ್ಲಾವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸಲಿದೆ ಎಂದು ಹೇಳಿದರು.
ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಆಗಿದೆ ಈಶ್ವರಪ್ಪನವರ ವಿರುದ್ಧ ಕ್ರಮದ ಬಗ್ಗೆ ಮೇಘರಾಜ್ ಸಮರ್ಪಕ ಕ್ರಮ ಕೈಗೊಳ್ಳುವ ಬಗ್ಗೆ ಉತ್ತರ ನೀಡಿಲ್ಲ. ಎಲ್ಲಾದಕ್ಕೂ ಸೂಕ್ತ ಸಮಯದಲ್ಲಿ ಬಿಜೆಪಿ ಏನು ಕ್ರಮಕೈಗೊಳ್ಳಬೇಕೋ ಅದನ್ನ ತೆಗೆದುಕೊಳ್ಳುತ್ತಿದೆ ಎಂದು ಮಾತ್ರ ಉತ್ತರ ನೀಡಿದರು.
ಇದನ್ನೂ ಓದಿ-https://suddilive.in/archives/11178