ಸ್ಥಳೀಯ ಸುದ್ದಿಗಳು

ಸಚಿವ ಮಧು ಬಂಗಾರಪ್ಪನವರ ವಿರುದ್ಧವೇ ಉಡಾಫೆ ಸಚಿವ ಎಂದು ಸ್ವಪಕ್ಷೀಯದವರಿಂದ ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಒಂದು ಕಡೆ ಬಿಜೆಪಿಯಲ್ಲಿ ಈಶ್ವರಪ್ಪ ಭಿನ್ನಮತ ಸ್ಪೋಟಗೊಂಡರೆ, ಇನ್ನೊಂದು ಕಡೆ ಕಾಂಗ್ರೆಸ್ ನಲ್ಲೂ  ಅಸಮಾಧಾನ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ವಿರುದ್ಧವೇ ಸ್ವಪಕ್ಷೀಯದವರೆ ಘೋಷಣೆ ಕೂಗಿದ್ದಾರೆ.

ಉಡಾಫೆ ಜಿಲ್ಲಾ ಮಂತ್ರಿ ಎಂದು ಘೋಷಣೆ ಕೂಗಲಾಗಿದೆ. ಶಿಕಾರಿಪುರದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗವೇ ಪ್ರತಿಭಟನೆ ನಡೆದಿದೆ.

ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಬೆಂಬಲಿಗರಿಂದ ಪ್ರತಿಭಟನೆ ನಡೆದಿದೆ.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಲಾಗಿದೆ. “ಎಲ್ಲಾ ಪಕ್ಷ ಹಾಳು ಮಾಡಿ ಅವರ ಅಪ್ಪ ಬಂಗಾರಪ್ಪ ಬಂದ್ರು., ಈಗ ಮಧು ಬಂಗಾರಪ್ಪ ಕಾಂಗ್ರೆಸ್ ಹಾಳು ಮಾಡುವುದಕ್ಕೆ ಬಂದಿದ್ದಾರೆ.* ಎಂದು ಪ್ರತಿಭಟನಾಕಾರರು ಕೂಗಿದರು.

ಕಾಂಗ್ರೆಸ್ ಕಚೇರಿ ಮುಂಭಾಗ ಮೂಲ ಕಾಂಗ್ರೆಸ್ ಗರಿಂದ ಅರೋಪ ಕೇಳಿ ಬಂದಿದೆ. ಇಡೀ ಜಿಲ್ಲೆಯ ಕಾಂಗ್ರೆಸ್ ನ್ನು ಮಧುಬಂಗಾರಪ್ಪ ಹಾಳು ಮಾಡುತ್ತಿದ್ದಾರೆ.ಪಕ್ಷ ನಮ್ಮ ದೇವರು ಎಂದು ಇಷ್ಟು ದಿನ ಸುಮ್ಮನೆ ಇದ್ವಿ. ಇನ್ನು ಮಂದೆ ಹಾಗೆ ಆಗಲ್ಲ. ಪಕ್ಷದ ವಿರುದ್ಧ ವೇ ಕೆಲಸ ಮಾಡುತ್ತೇವೆ ಎಂದು ಆಕ್ರೋಶವನ್ನ ಪ್ರತಿಭಟನಾಕಾರರು ಹೊರ ಹಾಕಿದರು.

ಇದನ್ನೂ ಓದಿ-https://suddilive.in/archives/10767

Related Articles

Leave a Reply

Your email address will not be published. Required fields are marked *

Back to top button