ಸ್ಥಳೀಯ ಸುದ್ದಿಗಳು

ಮತ್ತೆ ಸೌಂಡ್ ಮಾಡ್ತಾ ಇದೆ ಕುಮಾರ್ ಬಂಗಾರಪ್ಪನವರ ಈ ಫೊಟೊ!

ಸುದ್ದಿಲೈವ್/ಶಿವಮೊಗ್ಗ

ಕೊನೆಗೂ ಮಾಜಿ ಸಚಿವ ವಸಂತ್ ಕುಮಾರ್ ಬಂಗಾರಪ್ಪ ಪಕ್ಷಾಂತರ ಮಾಡಲಿಲ್ಲ. ರಾಜಕಾರಣದಲ್ಲಿ ಸಕ್ರೀಯವಾಗಿ ಇಲ್ಲವಾದರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಆಕ್ಟಿವ್ ಆಗಿದ್ದಾರೆ. ಬಂಗಾರಪ್ಪನವರ ಜೊತೆ ಇದ್ದ ಫೊಟೊಗಳನ್ನ ಬದಲಿಸಿ ಕೊಳ್ಳುವ ಮೂಲಕ ತಮ್ಮ ಬೆಂಬಲಿಗರಿಗೆ ಒಂದು ಸೂಚನೆ ಕೊಡ್ತಾ ಇದ್ದಾರಾ? ಎಂಬ ಅನುಮಾನ ಹುಟ್ಟಿಸಿದೆ.

ಅವರ ಫೊಟೊ ಬದಲಾವಣೆಗೆ ನೆಟ್ಟಿಗರು ಮಾತ್ರ ರಾಜಕೀಯದಲ್ಲಿ ತಡಗಿಸಿಕೊಳ್ಳಿ ಎಂಬ ಸಲಹೆಗಳನ್ನ  ನೀಡುತ್ತಿದ್ದಾರೆ. ಕುಟುಂಬ ಒಂದಾಗಲಿ ಎಂದು ಹೇಳ್ತಾ ಇದ್ದಾರೆ.‌ ಸೊರಬದಲ್ಲಿ ನೀವು ಸೋತ ಮೇಲೆ ಜನರಿಗೆ ಬುದ್ದಿ ಬಂದಿದೆ ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಈ ಪ್ರತಿಕ್ರಿಯೆಗಳ ಜೊತೆ ಹತ್ತು ಹಲವು ಪ್ರಶ್ನೆಗಳನ್ನು ಈ ಫೋಟೋ ಹುಟ್ಟುಹಾಕಿದೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ನವರು ತಮ್ಮ ಫೇಸ್ ಬುಕ್ ಫೇಜ್ ನ್ನಲ್ಲಿ ಈ ಫೋಟೋ ಹಂಚಿಕೊಂಡಿರುವುದು ಮಾತ್ರ ಹತ್ತುಹಲವು ಸಂದೇಶವನ್ನ ನೀಡ್ತಾ ಇದ್ದಾರಾ ಎಂಬ ಕುತೂಹಲವೂ ಹೆಚ್ಚಾಗಿದೆ. ಆದರೆ ಸ್ಪಷ್ಟತೆ ಇಲ್ಲದೆ ಇರುವುದರಿಂದ ನೆಟ್ಟಿಗರ ಪ್ರತಿಕ್ರಿಯೆ ಮೂಲಕ ಹೊರಬೀಳ್ತಾ ಇವೆ.‌

ಈ ಫೋಟೋ ದಲ್ಲಿ ಮಾನ್ಯ ಮಂತ್ರಿಗಳಾದ ಮಧು ಬಂಗಾರಪ್ಪ ನವರು,ಮತ್ತು ಮಾಜಿ ಮುಖ್ಯ ಮಂತ್ರಿಗಳಾದ ಬಂಗಾರಪ್ಪನವರು ಇರುವುದು ಚರ್ಚೆಗೆ ಗ್ರಾಸವಾಗಿದೆ. ಮತ್ತೆ ಒಂದಾಗುವ ಹಿಂಟ್ ಕೊಟ್ರಾ ಕುಮಾರ್ ಎಂಬ ಪ್ರಶ್ನೆ ಸಹ ಉದ್ಭವಿಸಿದೆ. ಒಂದು ಕೂಡು ಕುಟುಂಬದ ಫೋಟೋ ಹಾಕಿ ಅದೆಷ್ಟೋ ವರ್ಷಗಳಾಗಿತ್ತು ಚುನಾವಣಾ ಸಂಧರ್ಭದಲ್ಲಿ ಈ ಒಂದು ಫೋಟೋ ಸೊರಬ ಕ್ಷೇತ್ರದಲ್ಲಿ ಸಕತ್ ಸೌಂಡು ಮಾಡುತ್ತಿದೆ.

ಇದನ್ನೂ ಓದಿ-https://suddilive.in/archives/10519

Related Articles

Leave a Reply

Your email address will not be published. Required fields are marked *

Back to top button