ಸ್ಥಳೀಯ ಸುದ್ದಿಗಳು

ಗೋವಿನ ಕಬಾಬ್ ಮಾರಾಟ ಅಂಗಡಿ ಮೇಲೆ ಹಿಂದೂ ಸಂಘಟನೆ ದೂರು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಗೋವು ಮಾಂಸದಿಂದ ತಯಾರಿಸಿದ ಗೋಕಬಾಬ್ ಮಾರಾಟ ಅಂಗಡಿಯ ಮೇಲೆ ಹಿಂದೂ ಸಂಘಟನೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಗೋಮಾಂಸ ನಿಷೇಧ ಕಾಯ್ಧೆ ಜಾರಿಯಲ್ಲಿದ್ದರೂ ಭದ್ರಾವತಿಯಲ್ಲಿ ಯಥೇಚ್ಛವಾಗಿ ಗೋಮಾಂಸ ಮಾರಾಟ ಮತ್ತು ಕಬಾಬ್ ಮಾರಾಟ ಮಳಿಗೆಗಳು ಪತ್ತೆಯಾಗುತ್ತಿದೆ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ತರೀಕೆರೆ ರಸ್ತೆಯಲ್ಲಿರುವ ಸಾದತ್ ದರ್ಗಾ‌ಬಳಿ ಗೋಮಾಂಸದಿಂದ ತಯಾರಿಸುವ ಕಬಾಬ್ ನ್ನ ಓರ್ವ ವ್ಯಕ್ತಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ದೇವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನಂತರ ಸ್ನೇಹಿತರಿಗೆ ಕಾಬಾಬ್ ಖರೀದಿಸಿ ಠಾಣೆಗೆ ತರುವಂತೆ ಸೂಚಿಸಿದ್ದಾರೆ. ಸ್ನೇಹಿತರಿಬ್ಬರು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ಸಾದತ್ ದರ್ಗಾ ಬಳಿ ಕಬಾಬ್ ಮಾರಾಟ ಮಾಡುತ್ತಿದ್ದವನಿಂದ ಕಬಾಬ್ ಸಮೇತ ಹೋಗಿ ಅಂಗಡಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/10435

Related Articles

Leave a Reply

Your email address will not be published. Required fields are marked *

Back to top button