ಕ್ರೈಂ ನ್ಯೂಸ್

ಯುವಕನಿಗೆ ಚಾಕು ಇರಿತ

ಸುದ್ದಿಲೈವ್/ಶಿಕಾರಿಪುರ

ಪ್ರೀತಿ ವಿಚಾರದಲ್ಲಿ ಯುವಕನಿಗೆ ಚಾಕು ಇರಿದಿರುವ ಘಟನೆ ಶಿಕಾರಿಪುರ ತಾಲೂಇನ ಶಿರಾಳಕೊಪಪದಲ್ಲಿ ಘಟನೆ ನಡೆದಿದೆ.

ಪ್ರೀತಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಆ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯುವತಿಯ ಸಹೋದರನಿಗೆ ಈ ಯುವಕ ಇಷ್ಟವಿರಲಿಲ್ಲವೆಂದು ತಿಳಿದುಬಂದಿದೆ.

ಈ ವಿಚಾರದಲ್ಲಿ ಯುವತಿಯ ಸಹೋದರನೇ  ಯುವಕನಿಗೆ ಚಾಕು ಇರಿದಿರುವುದಾಗಿ ತಿಳಿದು ಬಂದಿದೆ. ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಯುವತಿ ಅಣ್ಣನೇ ಚಾಕು ಇರಿದಿರುವುದಾಗಿ ಹೇಳಲಾಗುತ್ತಿದೆ.

ಸಲ್ಮಾನ ಅಲಿಯಾಸ್‌ ಗೂಡು(24) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ನಿನ್ನೆ ತಡರಾತ್ರಿ ಶಿರಾಳಕೊಪ್ಪದಲ್ಲಿ  ಘಟನೆ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಹಿತಿ ಅದುಮಿಟ್ಟರಾ ಪೊಲೀಸರು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ಪೊಲೀಸ್ ಇನ್ ಸ್ಪೆಕ್ಟರ್ ಗೆ ಕರೆ ಮಾಡಿ ವಿಚಾರಿಸಿದರೆ. ನಾನು ಮಾಹಿತಿ ಪಡೆದು ಹೇಳುವುದಾಗಿ ಹೇಳಿ ಎರಡು ಗಂಟೆ ಕಳೆದರೂ ಮಾಹಿತಿ ನೀಡಿಲ್ಲ. ಕೋಮು ಗಲಭೆಯಲ್ಲಿ ಮಾಹಿತಿ ನೀಡುವಲ್ಲಿ ಹಿಂದೇಟು ಹೊಡೆಯುತ್ತಿದ್ದ ಇಲಾಖೆ ಪ್ರೀತಿ ವಿಚಾರದಲ್ಲಿ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಎಸ್ಪಿ ಅವರೇ ಸ್ಥಳೀಯ ಠಾಣೆಯಿಂದ ಮಾಹಿತಿ ಪಡೆಯಲು ಹೇಳಿದ್ದಾರೆ ಎಂದರೂ ಪಿಎಸ್ ಐ ಅವರು ಮಾಹಿತಿ ಅದುಮಿಡುವ ಯತ್ನಿಸಿದ್ದಾರೆ.

ಇದನ್ಬೂ ಓದಿ-https://suddilive.in/archives/10298

Related Articles

Leave a Reply

Your email address will not be published. Required fields are marked *

Back to top button