ಲವ್, ಮ್ಯಾರೇಜ್ ಮತ್ತು ದೋಖಾ…!
ಸುದ್ದಿಲೈವ್/ ಶಿವಮೊಗ್ಗ
ಶಿವಮೊಗ್ಗದಲ್ಲಿ ಲವ್, ಮ್ಯಾರೇಜ್ ದೋಖಾ ಪ್ರಕರಣ ಇಂದು ಮತ್ತೆ ಮುನ್ನೆಲೆಗೆ ಬಂದಿದೆ. ಹಣಕ್ಕಾಗಿ ಮದುವೆಯಾಗೋದು ಇವಳ ಖಯ್ಯಾಲಿ ಎಂದು ಪತಿ ಜರಿದಿದ್ದಾನೆ.
ಮಲೆನಾಡಿನ ಯುವಕನಿಗೆ ದೋಖಾ ಆಗಿದೆ. ನ್ಯಾಯ ಸಿಕ್ಕಿಲ್ಲ ಎಂದು ಯುವತಿಯನ್ನ ಮದುವೆಯಾದ ಯುವ ಜರಿದಿದ್ದಾನೆ.ಯುವತಿಯಿಂದ ಲವ್, ಸೆಕ್ಸ್, ಮ್ಯಾರೇಜ್ ದೋಖಾ ಆಗಿದೆ ಎಂದು ಆರೋಪಿಸಿದ್ದಾನೆ.
ಶಿವಮೊಗ್ಗದ ಬೊಮ್ಮನ್ ಕಟ್ಟೆಯ ನಿವಾಸಿ ಸಂಕೇತ್ ಎಂಬ ಯುವಕನಿಗೆ ಮದುವೆಯಾದ ಯುವತಿ ವಂಚಿಸಿರುವುದಾಗಿ ಡಿಸೆಂಬರ್ ನಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿದ ಸಂಕೇತ್ ನನಗೆ ಇದು ವರೆಗೂ ನ್ಯಾಯ ದೊರೆತಿಲ್ಲವೆಂದು ಆರೋಪಿಸಿದ್ದಾನೆ
ಮದುವೆಯಾಗಿ ಬರೋಬರಿ 20 ಲಕ್ಷ ಮೋಸವಾಗಿದೆ. ಹೊಸನಗರ ತಾಲೂಕಿನ ಹೆಂಡೆಗದ್ದೆ ಗ್ರಾಮದ ನಿವಾಸಿ ಸನ್ನಿಧಿ ಎಚ್.ವೈ ಎಂಬ ಯುವತಿ ಯಿಂದ ಮೋಸವಾಗಿದೆ. ಪ್ರೀತಿಸಿ ಮದುವೆಯಾಗುವುದಾಗಿ ನಾಟಕವಾಡಿ ಮೋಸ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪ್ರೀತಿಸಿ, ಮದುವೆಯಾಗಿದ್ದ ಟಿಕ್ ಟಾಕ್ ಸುಂದರಿ ಸನ್ನಿಧಿ, ಸಂಕೇತ್ ಗೆ ಅಲ್ದೆ ಬೇರೆ ಯುವಕರ ಜೊತೆಯೂ ಸಂಬಂಧ ಇಟ್ಟುಕೊಂಡಿರುವುದಾಗಿ ಸಂಕೇತ್ ಎಫ್ ಐಆರ್ ನಲ್ಲಿ ಆರೋಪಿಸಿದ್ದಾನೆ. ಸಂಕೇತ್ ಎಂಬ ಯುವಕನ ಜೊತೆ ಕಳೆದ ವರ್ಷ ಫೆಬ್ರವರಿ ಯಲ್ಲಿ ಸನ್ನಿಧಿ ಮದುವೆಯಾಗಿದ್ದಳು.
ಒಂದೆರಡು ತಿಂಗಳ ಸಂಸಾರ ಮಾಡಿ ಕೈಕೊಟ್ಟ ಸುಂದರಿ ಸಂಕೇತ್ ಕೀಳು ಜಾತಿ ಎಂದು ಕೈಕೊಟ್ಟಿದ್ದಾಳೆ. ಇದೀಗ ಮತ್ತೊಬ್ಬ ಯುವಕನೊಂದಿಗೆ ಓಡಾಟ ಮಾಡಿದ್ದಾಳೆ. ಈ ಹಿಂದೆಯೂ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದ್ದ ಸನ್ನಿಧಿ ಸಫರ್ಕ ಇಟ್ಟುಕೊಂಡಿರುವುದಾಗಿ ಸಂಕೇತ್ ಆರೋಪಿಸಿದ್ದಾರೆ.
ಲವ್ ಮಾಡಿ ಹಣ ಪೀಕಿಗೊಳ್ಳೋದು ಇವಳ ಚಾಳಿ, ಮಲೆನಾಡಿನಲ್ಲಿದ್ದಾಳೆ ಪ್ರೀತಿಸಿ ಮೋಸಮಾಡೋ ಖತರ್ನಾಕ್ ಯುವತಿ ಎಂದು ಸಂಕೇತ್ ದೂರಿಸಿದ್ದಾನೆ. ಆದರೆ ಯುವತಿ ಸಹ ಹೊಸನಗರ ತಾಲೂಕಿನ ನಗರಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸೊದ್ದಳು. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಸಂಕೇತ್ ದೊಡ್ಡಪೆಟೆ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾನೆ.
ಇದನ್ನೂ ಓದಿ-https://suddilive.in/archives/8900