ಕ್ರೈಂ ನ್ಯೂಸ್

ಭದ್ರಾವತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ-ಪಕ್ಷಾತೀತವಾಗಿ ಬಂದು‌ಎಸ್ಪಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ಶಾಸಕ ಸಂಗಮೇಶ್ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷದ ವತಿಯಿಂದ ಎಸ್ಪಿ ಕಚೇರಿಯ ಮುಂದೆ ಭರ್ಜರಿ ಪ್ರತಿಭಟನೆ ನಡೆದಿದೆ.‌ ಶಾರದಾ ಅಪ್ಪಾಜಿ ಗೌಡರ ನೇಋತ್ವದಲ್ಲಿ ಪ್ರತಿಭಟನೆ ನಡೆದಿದೆ.

ಶಿವಮೊಗ್ಗ ಎಸ್ಪಿ ಕಚೇರಿ ಎದುರು ತೊಲಗಲಿ ತೊಲಗಲಿ ಭದ್ರಾವತಿಯಲ್ಲಿ ಗೂಂಡಾಗಿರಿ ತೊಲಗಲಿ. ತೊಲಗಲಿ ತೊಲಗಲಿ ಕಾನೂನು ಬಾಹಿರ ಚಟುವಟಿಕೆ ತೊಲಗಲಿ ಎಂದು ಘೋಷಣೆ ಕೂಗಲಾಗಿದೆ.

ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಬೆಂಬಲಿಗರಿಂದ ದಬ್ಬಾಳಿಕೆ ನಡೆಯುತ್ತಿದೆ. ಕೂಡಲೇ ಭದ್ರಾವತಿಯಲ್ಲಿ ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗಿದೆ.

ಭದ್ರಾವತಿಯಲ್ಲಿ ನಡೆಯುತ್ತಿರುವ ಇಸ್ಪೀಟ್ ಹಾವಳಿ ತಡೆಗಟ್ಟುವಂತೆ ಆಗ್ರಹಿಸಲಾಗಿದೆ. ಈ ವೇಳೆ ಮಾತನಾಡಿದ ಶಾರದ ಅಪ್ಪಾಜಿ ಗೌಡರು, ಭದ್ರಾತಿಯಲ್ಲಿ ಮಾತನಾಡಲು ಹೋಗುವರ ವಿರುದ್ಧ ಸುಖಾ ಸುಮ್ಮನೆ ಕೇಸ್ ಹಾಕಲಾಗುತ್ತಿದೆ. ಇಸ್ಪೀಟು, ಗಾಂಜಾ, ಕ್ರಿಕೆಟ್ ಬೆಟ್ಟಿಂಗ್, ಒಸಿಯಂತಹ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗಿದೆ. ಇದಕ್ಕೆ ಇಲಾಖೆ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದರು.

ಚಂದ್ರೇಗೌಡ ಈ ಬಗ್ಗೆ ಮಾತನಾಡಿ, ಶಾಸಕರ ಮನೆಯಿಂದಲೇ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದೆ. ಜಮೀನು ವಿಚಾರದಲ್ಲಿ ನಡೆದ ಗಲಾಟೆಗೆ ಅಟ್ರಾಸಿಟಿ ಪ್ರಕರಣ ದಾಖಲಾಗುತ್ತಿದೆ.‌ ಭದ್ರಾವತಿಯಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯಗೊಂಡಿದೆ. ಶಾಸಕರ ಮಕ್ಕಳ ಜೊತೆ ಪೊಲೀಸರು ಕೈಜೋಡಿಸಿರುವ ಬಗ್ಗೆ ಆರೋಪ ಮಾಡಿದ್ದಾರೆ. ಹಾಗಾಗಿ ಎಸ್ಪಿ ಅವರಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಕಡಿವಾಣ ಹಾಕದಿದ್ದರೆ ಪಕ್ಷಾತೀತವಾಗಿ ಪಾದಯಾತ್ರೆ ನಡೆಯಲಿದೆ ಎಂದು ಗುಟರ್‌ ಹಾಕಿದರು.‌

ಇದನ್ನೂ ಓದಿ-https://suddilive.in/archives/6542

Related Articles

Leave a Reply

Your email address will not be published. Required fields are marked *

Back to top button