ನನ್ನನ್ನ ಶಿವಣ್ಣ ಅಲ್ಲ ಎಂದು ಚೇಂಜ್ ಮಾಡಿಬಿಡಿ ಎಂದು ನಟ ಹೇಳಿದ್ದೇಕೆ?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಶಿವಣ್ಣನ ಹವ ಮುಂದುವರೆದಿದೆ. ನಟ, ದೊಡ್ಮನೆ ಹುಡುಗ ಆದುದರಿಂದ ಹೋದಕಡೆಯಲ್ಲ ಶಿವಣ್ಣನನ್ನ ನೋಡಲು ಜನ ಬರುತ್ತಿದ್ದಾರೆ.
ಇಂದು ಹೊಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಅಸಮಾವೇಶದಲ್ಲಿ ಭರ್ಜರಿ ಜನ ಸೇರಿದ್ದಾರೆ. ಸಂಜೆ 5-30ಕ್ಕೆ ಕಾರ್ಯಕ್ರಮ ನಡೆಯ ಬೇಕಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತ ಮತ್ತು ನಟ ಶಿವರಾಜ್ ಕುಮಾರ್ ವೇದಿಕೆಗೆ ಬಂದಿದ್ದು 8-30 ಕ್ಕೆ.
ಮೂರು ಗಂಟೆ ಕಾದರೂ ಜನ ಮಾತ್ರ ಶಿವಣ್ಣನನ್ನ ನೋಡಲು ಕಡಿಮೆಯಾಗುತ್ತಿಲ್ಲ. ವೇದಿಕೆಗೆ ನಟ ಮತ್ತು ಅಭ್ಯರ್ಥಿ ಬರುತ್ತಿದ್ದಂತೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬಂದದ್ದಾರೆ. ಹೊಳೆಹೊನ್ನೂರು ಬಸ್ ಸ್ಟ್ಯಾಂಡ್ ಜಾಗದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಜನ ಸಾಗರವೇ ಹರಿದುಬಂದಿತ್ತು.
ವೇದಿಕೆ ಮೇಲೆ ಮಾತನಾಡಿದ ನಟ ಶಿವರಾಜ್ ಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತರಿಗೆ ಒಮ್ಮೆ ಅವಕಾಶಕೊಡಿ. ಅವರು ಕೆಲಸ ಮಾಡೇ ಮಾಡ್ತಾರೆ. ಅವರು ಕೆಲಸ ಮಾಡೋರಲ್ಲ ಎಂದು ನಿಮ್ಮಮನಸಿಗೆ ಬಾರದಿದ್ದರೆ ನನ್ನನ್ನ ಶಿವಣ್ಣ ಅಲ್ಲ ಅಂತ ಚೇಂಜ್ ಮಾಡಿಬಿಡಿ ಎಂದು ಸವಾಲು ಎಸೆದಿದ್ದಾರೆ.
ಇದಕ್ಕೂ ಮೊದಲು ನಾತನಾಡಿದ ಕಾಂಗ್ರೆಸ್ ಅಭ್ಯರ್ಥಿ, ನಾನು ಈ ಜಿಲ್ಲೆಯ ಸೊಸೆ. ನನಗೆ ಯಾಕೆ ಮತಕೊಡಬಾರದು. ನಾನು ಬಂಗಾರಪ್ಪನವರ ಮಗಳಾಗಿದ್ದೇನೆ. ಜನರಿಗೆ ಸೇವೆ ಮಾಡಲು ನನಗೆ ಅವಕಾಶಕೊಡಿ ಎಂದು ಕೋರಿದರು.
ಇದ್ನೂ ಓದಿ-https://suddilive.in/archives/11488