ರಾಘಣ್ಣ ಕೆಲಸ ಮಾಡಲಿಲ್ಲ ಎಂದರೆ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಬಹುದು, ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಎಲ್ಲಿಗೆ ಹೋಗ್ತೀರಾ?ಹರತಾಳು ಹಾಲಪ್ಪ
ಸುದ್ದಿಲೈವ್/ಶಿವಮೊಗ್ಗ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆ, ನೀರಾವರಿ ಕೆಲಸಗಳು ಆಗಿವೆ. ಇದಕ್ಕೆ ರಾಘವೇಂದ್ರ, ಶಾಸಕ ಅಶೋಕ್ ನಾಯ್ಕ್ ಮತ್ತು ಈಗಿನ ಶಾಸಕಿ ಶಾರದ ಪೂರ್ಯನಾಯ್ಕ್ ರ ಕಾಣಿಕೆ ಅಪಾರ ಎಂದು ಮಾಜಿ ಸಚಿವ ಹರತಾಳ ಹಾಲಪ್ಪ ತಿಳಿಸಿದರು.
ಅವರು ಸೈನ್ಸ್ ಮೈದಾನದಲ್ಲಿ ನಡೆದ ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ, ಶರಾವತಿ ಸಂತ್ರಸ್ತ್ರರ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಬಾಯಿ ಬಿಡಲು ಸಾಧ್ಯನಾ? ಒಂದು ವೇಳೆ ರಾಘಣ್ಣ ಕೆಲಸ ಮಾಡಲಿಲ್ಲ ಎಙದರೆ ಮನೆಮುಂದೆ ಧರಣಿ ಮಾಡಬಹುದು ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಎಲ್ಲಿಗೆ ಹೋಗ್ತೀರಾ? ಎಂದು ಪ್ರಶ್ನಿಸಿದರು.
ರಾಜ್ ಕುಟುಂಬಕ್ಕೆ ಗೌರವವಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಎಲ್ಲಿ ಹೋಗೋಣ? ಅವರ ಮನೆಯ ಮುಂದೆ ದೊಡ್ಡ ದೊಡ್ಡ ನಾಯಿ ಕಟಗಟಿರುತ್ತಾರೆ ಎಂದ ಹರತಾಳುಹಾಲಪ್ಪ ಕಾಂಗ್ರೆಸ್ ಅಭ್ಯರ್ಥಿ ರಾಜಕೀಯಕ್ಕೆ ಬಂದು ಮರ್ಯಾದೆ ತೆಗೆದಿದ್ದಾರೆ. ಇಂತಹ ಅಭ್ಯರ್ಥಿ ನಮಗೆ ಬೇಡ, ಸದಾ ನಮ್ಮ ಜೊತೆ ಇರುವ ರಾಘಣ್ಣನನ್ನ ಗೆಲ್ಲಿಸೋಣ ಎಂದು ಕರೆ ನೀಡಿದರು.
ಕಾರ್ಯಕರ್ತನ ಆದೇಶ
ಭಾಷಣದ ಆರಂಭಕ್ಕೆ ಮುಂದಾದ ಮಾಜಿ ಸಚಿವ ಹರತಾಳು ಹಾಲಪ್ಪ, ನಾನು ಮಾತಾಡೋದು ಬೇಡ ಎಂದು ಕೊಂಡಿದ್ದೆ. ರಾಘಣ್ಣ ಮಾತನಾಡು ಎಂದರು ಹಾಗಾಗಿ ಮಾತನಾಡುವೆ ಎನ್ನುತ್ತಿದ್ದಂತೆ ಸಭೀಕರ ಕಡೆಯಿಂದ ಮಾತನಾಡಿ ಸ್ವಾಮಿ ಯಾಕೆ ಮಾತನಾಡೊಲ್ಲ ಎನ್ನುತ್ತಿದ್ದಂತೆ ಆಯ್ತು ಮಾತನಾಡುತ್ತೀನಿ ಬಿಡಪ್ಪ ಎಂದು ಮಾಜಿ ಸಚಿವರು ಹೇಳಿದ್ದು ಸಭೀಕರನ್ನ ನಗೆ ಪಾಟಲಿಗೆ ತಳ್ಳಿತು.
ಇದನ್ನೂ ಓದಿ-https://suddilive.in/archives/11896