ಸಂಸದರ ವಿರುದ್ಧ ಸಚಿವ ಮಧು ಬಂಗಾರಪ್ಪ ಗ ಆಗಿದ್ದೇಕೆ?
ಸುದ್ದಿಲೈವ್/ಶಿವಮೊಗ್ಗ
ಸಂಸದ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ವಿರುದ್ಧ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಡಕ್ ಎಚ್ಚರಿಕೆ ನೀಡುವ ಮೂಲಕ ಸಂಸದರ ಪಂಚಾಯಿತಿಯನ್ನ ನಾನು ಹೊರಗೆ ಹಾಕುವುದಾಗಿ ಗರಂ ಆಗಿದ್ದಾರೆ.
ಶುಗರ್ ಫ್ಯಾಕ್ಟರಿಯ ಜಾಗ ಒಕ್ಕಲೆಬ್ಬಿಸುವ ಕುರಿತು ಬಿಜೆಪಿ ಮೇಘರಾಜ್ ಸಚಿವ ಮಧು ಬಂಗಾರಪ್ಪನವರಿಗೆ ರೈತರು ಮನವಿ ನೀಡುವ ತನಕ ಸಚಿವರು ಮಾಹಿತಿ ಇಲ್ಲ ಎಂದಿದ್ದಾರೆ. ಈಗಲಾದರೂ ಗೊತ್ತಾಯಿತಲ್ಲ ಎಚ್ಚೆತ್ತುಕೊಳ್ಳಿ ಎಂದು ಮೇಘರಾಜ್ ಪ್ರತಿಭಟನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಂಸದು ಅಟರ್ನಿ ಜನರಲ್ ಜೊತೆ ಮಾಡಿ ಜಿಲ್ಲಾ ಉಸ್ತುವರಿ ಸಚಿವರು ಮಾತನಾಡಿ ಕಾನೂನಾತ್ಮಕ ಹೋರಾಟಕ್ಕೆ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಬಿ.ವೈ ರಾಘವೇಂದ್ರ ಹೇಳಿದ್ದರು. ಇದರ ವಿರುದ್ಧ ಗರಂ ಆದ ಮಧು ಬಂಗಾರಪ್ಪ ಎಚ್ಚರಿಕೆ ಇಂದ ಸಂಸದರು ಮತ್ತು ಜಿಲ್ಲಾಬಿಜೆಪಿ ಅಧ್ಯಕ್ಷರು ಇದ್ದರೆ ಒಳ್ಳೆಯದು. ಇಲ್ಲವಾದಲ್ಲಿ ಅವರ ಮತ್ತೊಂದು ವಿಷಯ ಬಿಚ್ಚಿಡುವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಷುಗರ್ ಫ್ಯಾಕ್ಟರಿ ವಿಚಾರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದ್ದರು. ಆಗ ಏನು ಕ್ರಮ ಕೈಗೊಳ್ಳದ ಬಿಜೆಪಿಯ ಯಡಿಯೂರಪ್ಪನವರ ಕುಟುಂಬ ಈಗ ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ದ ಮಾತನಾಡಿದ್ದಾರೆ. ಸಙಸತ್ ನಲ್ಲಿ ಸಂತ್ರಸ್ತ ರೈತರ ಬಗ್ಗೆ ಸಂಸದರು ಮಾತನಾಡಲಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಇದು ಅವರಿಗೆ ಶೋಭೆ ತರೊಲ್ಲೆಂದು ಗರಂ ಆಗಿದ್ದಾರೆ.
ಷುಗರ್ ಫ್ಯಾಕ್ಟರಿ ವಿಚಾರದಲ್ಲಿ ಕಾನೂನು ತಜ್ಣರ ಸಲಹೆ ಪಡೆದು ಮುಂದಿನ ಹೋರಾಟಕ್ಕೆ ಅಣಿಯಾಗಲಿದ್ದೇವೆ. ಆದರೆ ಜನರನ್ನ ಎತ್ತಿಕಟ್ಟುವ ಕೆಲಸ ಬಿಡಬೇಕು ಇಲ್ಲವಾದಲ್ಲಿ ಅವರ ಮತ್ತೊಂದು ಪಂಚಾಯಿತಿಯನ್ನ ಬಿಚ್ಚಿಡಬೇಕಾಗುತ್ತದೆ. ಇದೊಂದೇ ವಿಷಯವಲ್ಲ ಬೇರೆದು ಹೊರಗಿಡಬೇಕಾಗುತ್ತದೆ ಎಂದು ಹೇಳಿದರು.
ಪಾದಯಾತ್ರೆ ಮಾಡಿ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ಕೊಡಿಸದ ಸಂಸದರು ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಗೂರವಾಗಿ ಮಾತನಾಡಬಾರದು. ಜನರನ್ನ ಎತ್ತುಕಟ್ಟುವ ಕೆಲಸ ಮಾಡಬಾರದು.
ಪ್ರತಾಪ್ ಸಿಂಹ ಸಿದ್ದರಾಮಯ್ಯರಿಗೆ ಸೋಮಾರಿ ಸಿದ್ದ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಈ ಹೇಳಿಕೆ ಪ್ರತಾಪ್ ಸಿಂಹರ ಯೋಗ್ಯತೆ ತೋರುತ್ತದೆ ಎಂದು ದೂರಿದರು.
ಇದನ್ನೂ ಓದಿ-https://suddilive.in/archives/5564