ರಾಜ್ಯ ಸುದ್ದಿಗಳು

ತಮಿಳು ನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನ ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ-ವಕೀಲ ಸಂಘದಿಂದ ಸಾಥ್

ಸುದ್ದಿಲೈವ್/ಶಿವಮೊಗ್ಗ

ತಮಿಳುನಾಡಿಗೆ ಕಾವೇರಿ ‌ನೀರು ಹರಿಬಿಡುತ್ತಿರುವುದನ್ನ ಖಂಡಿಸಿ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದೆ. ರಾಜ್ಯ ರೈತರ ಪ್ರತಿಭಟನೆಗೆ ವಕೀಲರ ಸಂಘ ಬೆಂಬಲಿಸಿದೆ.

ಕಾವೇರಿ ನೀರು ಬಿಡುತ್ತಿರುವುದಕ್ಕೆ ರೈತ ಸಂಘಟನೆ  ಖಂಡಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ತತ್ ಕ್ಷಣ ನಿಲ್ಲಿಸಬೇಕು ಎಂದು ಮನವಿಯಲ್ಲಿ  ಒತ್ತಾಯಿಸಲಾಯಿತು.

ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘ ವಿಶ್ವ ನೀರು ನೀತಿ ರಚಿಸಬೇಕು. ಸಂಕಷ್ಟ ಪರಿಹಾರ ಕಂಡುಕೊಳ್ಳಬೇಕು. ಅಲ್ಲಿಯ ವರೆಗೂ ತಮಿಳು ನಾಡಿಗೆ ನೀರು ಹರಿಸದಂತೆ  ಆಗ್ರಹಿಸಿದರು. ಜೊತೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಲಾಪದಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಭಾಗಿ

ತಮಿಳುನಾಡಿಗೆ ಕಾವೇರಿ ‌ನೀರು ಹರಿಸುತ್ತಿರುವುದನ್ನ  ಖಂಡಿಸಿ ಶಿವಮೊಗ್ಗದಲ್ಲಿ  ವಕೀಲರು  ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಭಾಗಿಯಾದರು.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲಾಗುತ್ತಿದ್ದ ರೈತ ಸಂಘದ ಪ್ರತಿಭಟನೆಯಲ್ಲಿ ವಕೀಲರು ಭಾಗಿಯಾದರು. ವಕೀಲ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕೆ. ಖಜಾಂಚಿ ಗಿರೀಶ್ ಎಸ್ ಜಾದವ್, ವಕೀಲರಾದ ಶ್ರೀಪಾಲ್ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/2023/09/29/ಡಿಸಿಸಿ-ಬ್ಯಾಂಕ್-ಅಧ್ಯಕ್ಷರಾ/

Related Articles

Leave a Reply

Your email address will not be published. Required fields are marked *

Back to top button