ರಾಜಕೀಯ ಸುದ್ದಿಗಳು

ತಮ್ಮ ಸ್ಪರ್ಧೆಯೂ ಖಚಿತವೆಂದ ಬಿಜೆಪಿಯ ಮಾಜಿ ಸಚಿವ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯಲ್ಲಿನ ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿದೆ. ಅಸಮಾಧಾನಿತರು ಒಂದೆಡೆ ಸೇರಿ ಚರ್ಚಿಸುತ್ತಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ದಾವಣಗೆರೆಯ ಮಾಜಿ ಸಚಿವ ಎಸ್ ಎ ರವೀಂದ್ರ ನಾಥ್ ಇಂದು ಮಾಜಿ ಡಿಸಿಎಂ ಈಶ್ವರಪ್ಪನವರನ್ನ‌ಭೇಟಿಯಾಗಿ ಮಹತ್ತರ ಚರ್ಚೆ ನಡೆಸಿದ್ದಾರೆ..

ದಾವಣಗೆರೆಯಲ್ಲಿ ರವೀಂದ್ರ ಅವರ ಸ್ಪರ್ಧೆಯೂ ಖಚಿತವೆಂದು ತಮ್ಮನ್ನ ಭೇಟಿಯಾದ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಬದಲಾವಣೆ ಬೇಕೆಂದು ಸಾಲು ಸಾಲು ಸಭೆಯನ್ನ ನಡೆಸಿದ್ದಾರೆ.

ಇಂದು ಈಶ್ವರಪ್ಪನವರನ್ನ ಭೇಟಿಯಾಗಿ ಅವರ ಸ್ಪರ್ಧೆಗೆ ಶುಭಾಶಯಗಳನ್ನ ತಿಳಿಸಿದರು. ರಾಜಕೀಯ ಹಿನ್ನಲೆಯಲ್ಲಿ ರವೀಂದ್ರ ಅವರ ಭೇಟಿ ಕುತೂಹಲ ಹುಟ್ಟಿಸಿದೆ. ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ಬಳ್ಳಾರಿ, ಬೆಳಗಾವಿಯಲ್ಲಿ ಬಂಡಾಯದ ಬಿಸಿ ಜೋರಾಗಿದೆ.

ಸದಾನಂದ ಗೌಡರೂ ಪಕ್ಷ ಶುದ್ಧೀಕರಣವಾಗಬೇಕು ಎಂದು ಹೇಳಿರುವುದು ಚುನಾವಣೆ ಹಿನ್ನಲೆಯಲ್ಲಿ ಮಹತ್ತರ ಬೆಳವಣಿಗೆ ಎಣಿಸಿದೆ.

ಇದನ್ನೂ ಓದಿ-https://suddilive.in/archives/11319

Related Articles

Leave a Reply

Your email address will not be published. Required fields are marked *

Back to top button