ಕುವೆಂಪು ವಿವಿಯ ಪ್ರಭಾರ ಕುಲಪತಿಗಳ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರದ ಆರೋಪ
ಸುದ್ದಿಲೈವ್/ಶಿವಮೊಗ್ಗ/22/12/2023
ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ(ಪ್ರಭಾರ) ಪ್ರೊ.ಎಸ್.ವೆಂಕಟೇಶ್ ಸುಳ್ಳುಪ್ರಮಾಣ ಪತ್ರ ಸಲ್ಲಿಸಿ ಪ್ರಾಧ್ಯಾಪಕರ ಹುದ್ದೆ ಪಡೆದಿರುವುದಾಗಿ ಜೈಭೀಮ್ ಕನ್ನಡ ಜಾಗೃತಿ ವೇದಿಕೆ ಮತ್ತು ಎಸ್ ಸಿ ಎಸ್ಟಿ ಅಸಂಘಟಿತ ಕಾರ್ಮಿಕ ಸಂಘ ಆಕ್ಷೇಪಿಸಿದೆ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಅಧ್ಯಾಯನ ವಿಭಾಗದ ಪ್ರಾಧ್ಯಪಕರಾಗಿರುವ ಪ್ರೊ. ಎಸ್. ವೆಂಕಟೇಶ್ ವಿವಿಯ ಕುಲಪತಿಗಳಾಗಿ (ಪ್ರಭಾರ) ಜವಬ್ದಾರಿ ನಿಭಾಯಿಸುತ್ತಿದ್ದಾರೆ. ಇವರು ಸುಳ್ಳು ಜಾತಿ ಪ್ರಮಾಣ ಪತ್ರಸಲ್ಲಿಸಿ ಹುದ್ದೆ ಪಡೆದುಕೊಂಡಿರುವುದಾಗಿ ಸಂಘಟನೆಯ ಮಂಜುನಾಥ್ ಆಕ್ಷೇಪಿಸಿದ್ದಾರೆ.
ಪ್ರೊ.ವೆಂಕಟೇಶ್ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಿ ಪತ್ರ ಸಲ್ಲಿಸಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಪಡೆದಿದ್ದಾರೆ. ಇವರು ಮೂಲ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ಮೋಸ ಮಾಡಿ ಪ್ರಾಧ್ಯಾಪಕ ಹುದ್ದೆಯನ್ನು ಪಡೆದಿರುತ್ತಾರೆ. ಈ ಬಗ್ಗೆ ಸಂಘಟನೆಯಿಂದ ಸರ್ಕಾರಕ್ಕೆ ಹಾಗೂ ವಿಶ್ವವಿದ್ಯಾಲಯಕ್ಕೆ ದೂರು ಸಲ್ಲಿಸಲಾಗಿದ್ದರೂ ಸೂಕ್ತ ಕ್ರಮ ವಹಿಸಿರುವುದಿಲ್ಲ ಎಂದು ದೂರಿದ್ದಾರೆ.
ಪ್ರೊ.ವೆಂಕಟೇಶ್ ಅವರು ಪರಿವಾರ ಜನಾಂಗದವರಾಗಿದ್ದು, ಶಾಲೆಯ ಎಲ್ಲಾ ದಾಖಲಾತಿಗಳಲ್ಲಿ ಪರಿವಾರ ಜನಾಂಗ ಎಂದು ನಮೂದಿಸಿದ್ದಾಗ್ಯೂ ಕೂಡ ಹುದ್ದೆಗೆ ಸೇರುವಾಗ ಎಸ್ಟಿ ಜನಾಂಗದ ನಾಯಕರಿಗೆ ಸೇರಿದ್ದು ಎಂದು ಜಾತಿ ಪ್ರಮಾಣ ನೀಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಇದನ್ನೂ ಓದಿ-https://suddilive.in/archives/5270